ಕರಾವಳಿ

ಬೈಂದೂರು ಠಾಣೆ ಸರಹದ್ದಿನಲ್ಲಿ ಇನ್ಮುಂದೆ ಗಸ್ತು ತಿರುಗಲಿದೆ ‘ಹೊಯ್ಸಳ’!

Pinterest LinkedIn Tumblr

ಕುಂದಾಪುರ: ಬೈಂದೂರು ಪೊಲೀಸ್ ಠಾಣೆ ಸರಹದ್ದಿನಲ್ಲಿ ಇನ್ನು ಮುಂದೆ ಪೊಲೀಸರ ಹೊಯ್ಸಳ ವಾಹನ ಗಸ್ತು ತಿರುಗಲಿದೆ.

ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಸುಮಾರು 19 ಗ್ರಾಮಗಳಿದ್ದು ಹೆದ್ದಾರಿ ಭಾಗ ಸೇರಿದಂತೆ ಬಹುತೇಕ ಗ್ರಾಮೀಣ ಹಾಗೂ ಕುಗ್ರಾಮ ಪ್ರದೇಶಗಳನ್ನು ಈ ಠಾಣೆ ಒಳಗೊಂಡಿದೆ. ಶುಕ್ರವಾರವಷ್ಟೇ ಪೊಲೀಸ್ ಇಲಾಖೆ ವತಿಯಿಂದ ಬೈಂದೂರು ಠಾಣೆಗೆ ಹೊಯ್ಸಳ ಗಸ್ತು ವಾಹನ ನೀಡಲಾಗಿದ್ದು ಈಗಾಗಲೇ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕಾರ್ಯ ಆರಂಭಗೊಂಡಿದೆ.

ಹೊಯ್ಸಳ ಗಸ್ತು ವಾಹನದಲ್ಲಿ ಎ.ಎಸ್.ಐ ಅಥವಾ ಅಧಿಕಾರಿ, ಸಿಬ್ಬಂದಿ ಹಾಗೂ ಹೋಂ ಗಾರ್ಡ್ ಸಹಿತ ಇಲಾಖಾ ಚಾಲಕ ಗಸ್ತು ಕಾರ್ಯ ನಿರ್ವಹಿಸಲಿದ್ದಾರೆ.

Comments are closed.