ಕರಾವಳಿ

ಶಾಸಕ ಕಾಮಾತ್‌ರಿಂದ ಬೆಂಗ್ರೆ ಜುಮ್ಮಾ ಮಸೀದಿ ರಸ್ತೆ ಉದ್ಘಾಟನೆ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಕಸಬಾ ಬೆಂಗ್ರೆ ಜುಮ್ಮಾ ಮಸೀದಿಗೆ ಹೋಗುವ ರಸ್ತೆಗೆ ಎಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ಹಾಕಿರುವ ಇಂಟರ್ ಲಾಕ್ ಅಭಿವೃದ್ಧಿ ಕಾಮಗಾರಿಯನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಶಾಸಕರೊಂದಿಗೆ ಸ್ಥಳೀಯ ಪಾಲಿಕೆ ಮಾಜಿ ಸದಸ್ಯ ರಘುವೀರ್,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ್ ಜೆ ಪೂಜಾರಿ,ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಬೆಂಗ್ರೆ ಅಧ್ಯಕ್ಷ ಎಮ್ ಸಲೀಂ, ಸ್ಥಳೀಯ ಪ್ರಮುಖರಾದ ಮೊಹಮ್ಮದ್ ಅಬ್ಬಾಸ್, ಅಸೀಫ್ ಕಚ್ಚೇರ್, ಅಶ್ರಫ್ ಕಚ್ಚೇರ್, ಶಬೀರ್ ಎಸ್. ಆರ್, ಇಮ್ರಾನ್ ಹಂಝಾ, ಶರೀಫ್, ಅರವಿಂದ ಬೆಂಗ್ರೆ ಸಹಿತ ಅನೇಕ ಕಾರ್ಯಕರ್ತರು ಭಾಗವಹಿಸಿದರು.

Comments are closed.