ಕರಾವಳಿ

ಶಾಸಕ ಕಾಮಾತ್‌ರಿಂದ ಬಜಾಲ್ 53ನೇ ವಾರ್ಡಿನಲ್ಲಿ ತಡೆಗೋಡೆಗೆ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 53ನೇ ಬಜಾಲ್ ವಾರ್ಡಿನ ಪಳ್ಳಕೆರೆ ಶಿವಮಂದಿರದ ಎದುರುಗಡೆಯ ತಡೆಗೋಡೆಯ ಗುದ್ದಲಿಪೂಜೆಯನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ನಗರ ದಕ್ಷಿಣ ಪ್ರಧಾನ ಕಾರ್ಯದರ್ಶಿ ರಮೇಶ್ ಕಂಡೆಟ್ಟು, ವಾರ್ಡ್ ನಹಿರಿಯರಾದ ಪಳ್ಳಕೆರೆ, ದೇವಪ್ಪ ಶೆಟ್ಟಿ, ಅಳಪೆ ವಾರ್ಡಿನ ಮಾಜಿ ಮನಪಾ ಸದಸ್ಯ ವಿಜಯಕುಮಾರ್ ಶೆಟ್ಟಿ, ವಾರ್ಡಿನ ಅಧ್ಯಕ್ಷ ವೇಣುಗೋಪಾಲ್ ರಾವ್, ಕಾರ್ಯದರ್ಶಿ ಚಂದ್ರಶೇಖರ ಜಯನಗರ, ವಾರ್ಡ್ ಪ್ರಭಾರಿ ಶಿವಾಜಿ ರಾವ್, ದಿನೇಶ್ ಶೆಟ್ಟಿ ಪಳ್ಳಕೆರೆ, , ಉಸ್ಮಾನ್, ಹರಿಪ್ರಸಾದ್ ಪಳ್ಳಕೆರೆ, ಸುರೇಶ್ ಆಚಾರ್ಯ, ಕಾರ್ಯಕರ್ತರು ಮತ್ತು ಪಳ್ಳಕೆರೆಯ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Comments are closed.