ಉಡುಪಿ: ನರೇಂದ್ರ ಮೋದಿ ನಿನ್ನೆ ದಿನ ಎರಡನೇ ಬಾರಿ ಪ್ರಧಾನಿಯಾಗಿ ದೇಶದ ಗದ್ದುಗೆಯನ್ನು ಏರಿದ್ದಾರೆ. ಈ ಹಿನ್ನಲೆಯಲ್ಲಿ ಮೋಧಿ ಅಭಿಮಾನಿಗಳು ನರೇಂದ್ರ ಮೋದಿಗೆ ವಿವಿಧ ರೀತಿಯಲ್ಲಿ ಶುಭಾಶಯ ಕೋರುತ್ತಿದ್ದಾರೆ. ಕೃಷ್ಣನೂರು ಉಡುಪಿಯಲ್ಲಿ ಮೋದಿ ಅಭಿಮಾನಿಯೊಬ್ಬರು ಹಾಲುಪಾಯಸ ಹಂಚುವ ಮೂಲಕ ಅಭಿಮಾನ ಪ್ರದರ್ಶಿಸಿದ್ದಾರೆ.
ಉಡುಪಿ ಬಿ.ಜೆ.ಪಿಯ ಶಕ್ತಿ ಕೇಂದ್ರ ಎಂದು ಕರೆಸಿಕೊಂಡಿರುವ ಕಡಿಯಾಳಿಯಲ್ಲಿ ಹೋಟೆಲ್ ಶ್ರೀನಿವಾಸ್ನ ನರಸಿಂಹ ಕಿಣಿಯವರು ಇಂದು ಬೆಳಗ್ಗೆಯಿಂದಲೇ ಹೋಟೆಲ್ಗೆ ಬಂದವರಿಗೆ ಉಚಿತ ಪಾಯಸ ನೀಡಿದ್ದಾರೆ. ಈ ನಡುವೆ ರಸ್ತೆ ಪಕ್ಕದಲ್ಲಿ ನಿಲ್ಲುವ ಬಸ್ನ ಪ್ರಯಾಣಿಕರಿಗೂ ಪೇಪರ್ ಗ್ಲಾಸ್ನಲ್ಲಿ ಹಾಲುಪಾಯಸ ಉಣಬಡಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿ ಆದಾಗಲೂ ಇದೇ ಹೋಟೆಲ್ನಲ್ಲಿ ಉಚಿತ ಹಾಲು ಪಾಯಸವನ್ನು ನೀಡಿದ್ದರು, ಇದೀಗ ನರೇಂದ್ರ ಮೋದಿ ಪ್ರಧಾನಿಯಾಗಿ ಪದಗ್ರಹಣ ಮಾಡುತ್ತಿರುವ ಈ ಸಂದರ್ಭದಲ್ಲೂ ಫೇಮಸ್ ಹಾಲು ಪಾಯಸ ಹಂಚಿದ್ದಾರೆ.
Comments are closed.