ಕರಾವಳಿ

ಮಳೆಗಾಗಿ ಗಂಗೊಳ್ಳಿಯಲ್ಲಿ ವಿಶೇಷ ನಮಾಜ್ ಮಾಡಿ ಪ್ರಾರ್ಥಿಸಿದ ಮುಸ್ಲೀಂ ಬಾಂಧವರು

Pinterest LinkedIn Tumblr

ಕುಂದಾಪುರ: ಗಂಗೊಳ್ಳಿಯಲ್ಲಿ ಮುಸ್ಲಿಂ ಬಾಂಧವರಿಂದ ಮಳೆಗಾಗಿ ವಿಶೇಷ ನಮಾಜ್ ಸಲಾತುಲ್ ಇಸ್ಥಿಸ್ಕಾವು ಗಂಗೊಳ್ಳಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಶನಿವಾರ ಬೆಳಿಗ್ಗೆ ನಡೆಯಿತು.

ಮದ್ರಸಾ ಝಿಯಾ ಉಲ್ ಉಲೂಮ್ ರಾಯ್ ಬರೆಲಿ, ಲಕ್ನೋದ ಉಪ ಪ್ರಾಂಶುಪಾಲ ಮೌಲಾನಾ ಅಬ್ದುಸ್ ಸುಭಾನ್ ಸಾಹಬ್ ನದ್ವಿ ಮದನಿಯವರು ವಿಶೇಷ ನಮಾಜ್ ಸಲಾತುಲ್ ಇಸ್ಥಿಸ್ಕಾ ನೆರವೇರಿಸಿ, ಕುತ್ಬಾ ಪಾರಾಯಣಗೈದರು. ಒಂದು ಗಂಟೆಯ ಈ ಒಂದು ವಿಶೇಷ ಪ್ರಾರ್ಥನೆಯಲ್ಲಿ ಗಂಗೊಳ್ಳಿ ಸಹಿತ ಆಸುಪಾಸಿನ ಗ್ರಾಮದ ನೂರಾರು ಮಂದಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಗಂಗೊಳ್ಳಿ ಜುಮ್ಮಾ ಮಸೀದಿಯ ಇಮಾಮ್ ಮೌಲಾನಾ ಮುಝಮ್ಮಿಲ್ ಸಾಹಬ್ ನದ್ವಿ, ಶಾಹಿ ಜುಮ್ಮಾ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ಮತೀನ್ ಸಾಹಬ್ ಸಿದ್ದಿಕಿ, ಮೋಹಿಯುದ್ದೀನ್ ಜುಮ್ಮಾ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ವಹಾಬ್ ಸಾಹಬ್ ನದ್ವಿ ಸಹಿತ ಹಲವರು ಉಪಸ್ಥಿತರಿದ್ದರು.

Comments are closed.