ಕರಾವಳಿ

ಹರಿದ್ವಾರದ ಮಾಧವೇಂದ್ರ ಆಸ್ಪತ್ರೆಗೆ ಅತ್ಯಂತ ನವೀನ ಥ್ರೀ ಚಾನೆಲ್ ಇ ಸಿ ಜಿ ಮಷೀನ್ ಹಸ್ತಾಂತರ

Pinterest LinkedIn Tumblr

ಮಂಗಳೂರು : ಇಂದು ನಡೆದ ಸರಳ ಸಮಾರಂಭದಲ್ಲಿ “ಕಾರ್ಡಿಯಾಲಜಿ ಅಟ್ ದೋರ್ಸ್ಟೆಪ್” ಯೋಜನೆಯ ಅಂಗವಾಗಿ ಹರಿದ್ವಾರದ ಮಾಧವೇಂದ್ರ ಮಣಿಪಾಲ ಆಸ್ಪತ್ರೆಗೆ ಅತ್ಯಂತ ನವೀನ ಥ್ರೀ ಚಾನೆಲ್ ಇ ಸಿ ಜಿ ಮಷೀನ್ ಅನ್ನು ಕೆಎಂಸಿ ಆಸ್ಪತ್ರೆಯಲ್ಲಿ ಹಸ್ತಾಂತರಿಸಲಾಯಿತು.

ಹರಿದ್ವಾರದ ಮಾಧವೇಂದ್ರ ಆಸ್ಪತ್ರೆಯ ಪರವಾಗಿ ದೆಹಲಿ ನಿವಾಸಿ ಪ್ರಕಾಶ್ ಪೈ ಅವರು ಸ್ವೀಕರಿಸಿದರು. ಈ ಸಮಯದಲ್ಲಿ ಮಾತನಾಡಿದ ಯೋಜನೆಯ ರೂವಾರಿ ಡಾ . ಪದ್ಮನಾಭ್ ಕಾಮತ್ ಇದೊಂದು ಬಹುಮುಖಿ ಸಮಾಜ ಸೇವೆಯಾಗಿದ್ದು ಈಗ ಉತ್ತರಾಖಂಡದ ಯಾತ್ರಾರ್ಥಿಗಳು ಹಾಗೂ ಜನತೆ ಪ್ರಯೋಜನ ಪಡೆಯುವಂತಾಗಿದೆ ಎಂದರು.

ಮಣಿಪಾಲ ಗ್ರೂಪಿನ CEO ಡಾ . ರಂಜನ್ ಪೈ ಅವರು ಈ ಒಂದು ಸಮಾಜಮುಖಿ ಕೆಲಸದ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ .

Comments are closed.