ಉಡುಪಿ: ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪುತ್ರಿ ಕೀರ್ತನಾ ಅವರ ವಿವಾಹವು ಉದ್ಯಮಿ ಸಂದೀಪ್ ಜೊತೆ ಉಡುಪಿಯ ಅಂಬಾಗಿಲಿನಲ್ಲಿ ನಡೆದಿದ್ದು ಈ ಸಮಾರಂಭಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಮಿಸಿದರು.
ಬೆಂಗಳೂರಿನಿಂದ ಜೊತೆಯಾಗಿ ಆಗಮಿಸಿದ ತಂದೆ-ಮಗ ಇರ್ವರು ಗೋದೂಳಿ ಲಗ್ನದಲ್ಲಿ ನಡೆದ ಮಾಜಿ ಶಾಸಕರ ಪುತ್ರಿಯ ಮದುವೆಯಲ್ಲಿ ಪಾಲ್ಘೊಂಡು ಶುಭ ಹಾರೈಸಿದ್ದು ಬಳಿಕ ಅಲ್ಲಿಂದ ಕಾಪುವಿಗೆ ತೆರಳಿದರು.
Comments are closed.