ಕರಾವಳಿ

ಮದುಮಗಳ ಚಿನ್ನದ ಡಾಬು ಮರಳಿಸಿ ಶಹಬ್ಬಾಸ್ ಎನಿಸಿಕೊಂಡ ಕುಂದಾಪುರದ ಯುವಕರು!

Pinterest LinkedIn Tumblr
ಉಡುಪಿ: ಮದುವೆಯ ಹಿಂದಿನ ದಿನ ಕಾಣೆಯಾಗಿದ್ದ 6 ಲಕ್ಷ ಬೆಲೆಬಾಳುವ ಮದುಮಗಳ ಚಿನ್ನದ ಸೊಂಟದ ಪಟ್ಟಿಯನ್ನು ವಾಪಾಸು ಯುವತಿಗೆ ನೀಡಿದ ಕುಂದಾಪುರ ಯುವಕರಿಬ್ಬರ ಪ್ರಾಮಾಣಿಕತೆ ಇದೀಗ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
ಉಡುಪಿ ಜಿಲ್ಲೆ ಕುಂದಾಪುರದ ಹೃದಯ ಭಾಗದಲ್ಲಿನ ಶರೋನ್ ಹೋಟೆಲ್​ನಲ್ಲಿ ವಧು ಮಾನಸ ಎಂಬುವರು ಮದುವೆ ಹಿಂದಿನ ದಿನ ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನದ ಸೊಂಟದ ಪಟ್ಟಿ ಕಳೆದುಕೊಂಡಿದ್ದು ಇಡೀ ಕುಟುಂಬ ಚಿಂತೆಗೀಡಾಗಿದ್ದರು.
ಅದೇ ಹೋಟೆಲ್​ಗೆ ಬಂದಿದ್ದ ಕುಂದಾಪುರದ ಮೂಲದ ಗುರುಪ್ರಸಾದ್ ಖಾರ್ವಿ ಮತ್ತು ರಾಘವೇಂದ್ರ ಖಾರ್ವಿ ಅವರಿಗೆ ಈ ಸೊಂಟದ ಪಟ್ಟಿ ಸಿಕ್ಕಿದೆ. ಬಳಿಕ ಹೋಟೆಲ್ ಸ್ವಾಗತಕಾರರ ಮೂಲಕ ಮದುಮಗಳ ಸೊಂಟದ ಪಟ್ಟಿ ಕಳೆದ ವಿಷಯ ತಿಳಿದ ಯುವಕರು ಮದುವೆ ಮನೆಯವರನ್ನು ಭೇಟಿಯಾಗಿ ಮದುಮಗಳಿಗೆ ಆ ಸೊಂಟದ ಪಟ್ಟಿಯನ್ನು ಹಸ್ತಾಂತರಿಸಿದ್ದಾರೆ.
ಎಲ್ಲೆಡೆ ಪ್ರಶಂಸೆ….
ಯುವಕರ ಈ ಪ್ರಾಮಾಣಿಕತೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದ್ದಂತೆ ಯುವಕರಿಬ್ಬರ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ವಿವಿಧ ಸಂಘಸಂಸ್ಥೆಗಳು ಯುವಕರನ್ನು ಗುರುತಿಸಿ ಸನ್ಮಾನಿಸಿದ್ದಾರೆ.

Comments are closed.