ಕರಾವಳಿ

ಸುವರ್ಣ ಮೂಲಸ್ಥಾನ, ಚಿತ್ರಾಪುರ ಕುಳಾಯಿ : ಏಪ್ರಿಲ್ 27-30 ಪುನರ್ ಪ್ರತಿಷ್ಠಾ – ಬ್ರಹ್ಮ ಕಲಶೋತ್ಸವ 

Pinterest LinkedIn Tumblr

ಮಂಗಳೂರು ಎಪ್ರಿಲ್.26: ಸುವರ್ಣ ಮೂಲಸ್ಥಾನದ ನೂತನ ರಾಜಗೋಪುರದ‌ ಉದ್ಫಾಟನೆ ಮತ್ತು ಪರಿವಾರ ದೇವತೆಗಳ ಸಹಿತ ಶ್ರೀ ನಾಗದೇವರ ಹಾಗೂ ಧರ್ಮ ದೈವಗಳ ಪುನರ್ ಪ್ರತಿಷ್ಠೆ – ಬ್ರಹ್ಮಕಲಶೊತ್ಸವವು ಚಿತ್ರಾಪುರ ಕುಳಾಯಿಯಲ್ಲಿ ಎ. 27ರಿಂದ 30ರವರೆಗೆ ದೇರೆಬೈಲು ಬ್ರಹ್ಮಶ್ರೀ ವಿಠಲದಾಸ ತಂತ್ರಿಯವರ ಮಾರ್ಗದರ್ಶನದಲ್ಲಿ ಜರಗಲಿದೆ.

ಎ. 27ರಂದು ಪ್ರಾರ್ಥನೆ, ತೋರಣ ಮೂಹೂರ್ತ, ವಾಸ್ತು ಹೋಮ, ಬಿಂಬಾಧಿವಾಸ, ಎ. 28ರಂದು ಗಣಯಾಗ, ಶ್ರೀ ನಾಗ ದೇವರ ಹಾಗೂ ಬ್ರಹ್ಮರಕ್ತೇಶ್ವರೀ, ನಂದಿಗೋಣ, ಕ್ಷೇತ್ರಪಾಲ ದೇವರ ಪ್ರತಿಷ್ಠೆ, ಎ. 29ರಂದು ಶ್ರೀ ಮಹಿಷಾಂದಾಯ, ಧೂಮಾವತಿ ಮತ್ತು ಬಂಟ , ಅಣ್ಣಪ್ಪ ಪಂಜುರ್ಲಿ ಪ್ರತಿಷ್ಟೆ, ಬ್ರಹ್ಮಕಲಶಾಭಿಷೇಕ, ಧೂಮಾವತಿ ದೈವದದರ್ಶನ ಸೇವೆ, ಅನ್ನ ಸಂತರ್ಪಣೆ, ಸಂಜೆ ಭಕ್ತಿಗೀತೋತ್ಸವ, ರಸಸಂಜೆ, ( ಕಲಾವತಿ ಪುತ್ರನ್‌ಉಡುಪಿ ಮತ್ತು ಬಳಗದವರಿಂದ) 7ರಿಂದ ಧಾರ್ಮಿಕ ಸಭೆ, 9 ರಿಂದಧರ್ಮ ದೈವಗಳ ನೇಮೋತ್ಸವ, ಎ. 30ರಂದು ದೈವಗಳ ಹೋಮ ಪಂಚಕಚ್ಚಾಯ ( ವಾರ್ಷಿಕ ಅಗೇಲು ಸೇವೆ) ಪ್ರಸಾದ ವಿತರಣೆ ನಡೆಯಲಿದೆ.

ಎ. 29ರಂದು ಸಂಜೆ ಶ್ರೀ ಕೃಷ್ಣ ರಂಗ ಮಂದಿರದಲ್ಲಿ ಮಾಧವ ಸುವರ್ಣರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ. ಶ್ರೀ ರುದ್ರಮುನಿ ಮಹಾಸ್ವಾಮಿ‌ಅವರಿಂದ ಆರ್ಶೀವಚನ, ಬ್ರಹ್ಮ ಶ್ರೀ ವಿಠಲದಾಸತಂತ್ರಿ‌ಅವರಿಂದಧಾರ್ಮಿಕ ಪ್ರವಚನ, ಆನಂದ ಸಿ. ಕುಂದರ್‌ ಅವರಿಂದ ದೀಪಾರಾಧನೆ ಜರಗಲಿದೆ.

ಅಥಿತಿಗಳಾಗಿ ಯಶ್‌ಪಾಲ್ ಎ ಸುವರ್ಣ, ಅಜೀತ್ ಸುವರ್ಣ, ಪ್ರಸಾದ್‌ ರಾಜ್‌ಕಾಂಚನ್, ಆನಂದ ಪಿ. ಸುವರ್ಣ, ಡಾ: ಕವಿತಾಡಿಸೋಜ, ಲೀಲಾಧರ ತಣ್ಣೀರುಬಾವಿ, ಶ್ರೀನಿವಾಸ ಸುವರ್ಣ, ಪುರಂದರ್‌ ಎನ್ ಸುವರ್ಣ, ಮಾಧವ ಸುವರ್ಣ ಅಳಕೆ ಭಾಗವಹಿಸಲಿರುವರು ಎಂದು ಸುವರ್ಣ ಮೂಲಸ್ಥಾನ, ಕುಳಾಯಿ ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಧವ ಸುವರ್ಣ ಅಳಕೆ ಇವರು ತಿಳಿಸಿದ್ದಾರೆ.

Comments are closed.