ಕುಂದಾಪುರ: ಕಾವ್ರಾಡಿ ಮುಳ್ಳುಗುಡ್ಡೆ ಎಂಬಲ್ಲಿ ಮಾರುತಿ ಓಮ್ನಿಯಲ್ಲಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಕಂಡ್ಲೂರು ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಯಡಮೊಗೆ ಗ್ರಾಮದ ಯಡಿಯಾಳ್ ಕೊಲ್ಲತ್ತಿಮನೆ ಸುಧೀರ ಕುಮಾರ್ ಬಂಧಿತ ಆರೋಪಿ. 2.430 ಲೀ. ಮದ್ಯ ಹಾಗೂ ಮಾರಾಟ ಮಾಡಿ ಸಂಗ್ರಹಿಸಿದ 1,880 ರೂ. ನಗದು ಹಾಗೂ ಆಮ್ನಿಯನ್ನು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ಶ್ರೀಧರ ನಾಯ್ಕ ನೇತ್ರತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
Comments are closed.