ಕುಂದಾಪುರ: ಸೌಪರ್ಣಿಕಾ ನದಿಯಲ್ಲಿ ತೇಲುತ್ತಿದ್ದ ತೆಂಗಿನ ಕಾಯಿಯನ್ನು ದೋಣಿಯ ಮೂಲಕ ಹೋಗಿ ಹೆಕ್ಕುತ್ತಿದ್ದ ಸಂದರ್ಭದಲ್ಲಿ ಹಿರಿಯ ನಾಗರಿಕರೋರ್ವರು ನೀರಿಗೆ ಬಿದ್ದು ಮೃತರಾದ ಘಟನೆ ಮರವಂತೆ ಗ್ರಾಮದ ಕಳಿಹಿತ್ಲಿನಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
ಕಳಿಹಿತ್ಲಿನ ರಿಚಡ್ ಗೋಸ್ವಾ ಲಿಸ್ (58) ಅವರು ಮೃತಪಟ್ಟ ವ್ಯಕ್ತಿ. ಇವರ ಪತ್ನಿ ಸಂಜೆ ಮನೆಗೆ ಬಂದಾಗ ಗಂಡ ಮನೆಯಲ್ಲಿರಲಿಲ್ಲ. ಹುಡುಕಾಡಿದಾಗ ದುರಂತ ಬೆಳಕಿಗೆ ಬಂದಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.