ಕರಾವಳಿ

ಪ್ರಚಾರದ ಹುಚ್ಚಿಗೆ ಕಾಲಿಗೆ ಚೈನ್ ಹಾಕಿ ಮರಕ್ಕೆ ಸುತ್ತಿ ಬೀಗದ ಕೀಲಿಕೈ ಬಿಸಾಕುತ್ತಿದ್ದ ಭೂಪ!

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕು ಅರೆಹೊಳೆ ಕ್ರಾಸ್ ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶನಿವಾರ ಕಾಲಿಗೆ ಸರಪಳಿ ಹಾಕಿಕೊಂಡು ಗಿಡಕ್ಕೆ ಸುತ್ತಿ ಬೀಗ ಹಾಕಿಕೊಂಡ ಅಮಾನವೀಯ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕೇರಳ ಮೂಲದ ಸಯ್ಯದ್ ಎಂಬವರ ಕಾಲಿಗೆ ಸರಪಳಿ ಸುತ್ತಿಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಸಯ್ಯದ್ ಕುಟುಂಬಿಕರು ಭಾನುವಾರ ಸಂಜೆ ಬೈಂದೂರು ಠಾಣೆಗೆ ಆಗಮಿಸಿದ್ದು, ಠಾಣಾಧಿಕಾರಿ ತಿಮ್ಮೇಶ್ ಸಯ್ಯದ್ ಕುಟುಂಬಿಕರಿಗೆ ಒಪ್ಪಿಸುವ ಸಮಯದಲ್ಲಿ ಅಘಾತಕಾರಿ ಸುದ್ದಿ ಬಹಿರಂಗವಾಗಿದೆ.

(ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಸಮ್ಮುಖದಲ್ಲಿ ಸಯ್ಯದ್‌ನನ್ನು ಆತನ ಮನೆಯವರಿಗೆ ಒಪ್ಪಿಸಲಾಯಿತು)

ಮಲೆಯಾಳಂ ಭಾಷೆ ಮಾತನಾಡುತ್ತಿರುವ ಸಯ್ಯದ್ ಅವರ ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ವಿಚಾರಣೆ ನಡೆಸಿದಾಗ ಈತ ಕೇರಳದ ಕೊಲಿಕೊಡ್ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿತ್ತು. ಕೂಡಲೇ ಸಯ್ಯದ್ ಮನೆಗೆ ಕಳುಹಿಸಲು ಬೈಂದೂರು ಪೊಲೀಸರು ಕೇರಳ ಪೊಲೀಸರ ನೆರವು ಕೋರಿದ್ದರು. ಸಯ್ಯದ್ ಬೈಂದೂರು ಪೊಲೀಸ್ ಠಾಣೆಯಲ್ಲೇ ಒಂದು ದಿನ ಕಳೆದಿದ್ದು, ರಾತ್ರಿ ಹಾಗೂ ಬೆಳಗ್ಗೆ ಊಟೋಪಚಾರ ವ್ಯವಸ್ಥೆ ಪೊಲೀಸರೇ ಮಾಡಿದ್ದರು.

ಪ್ರಚಾರಕ್ಕಾಗಿ…..!
ಮೇಲ್ನೋಟಕ್ಕೆ ಸಯ್ಯದ್ ಸ್ಥಳೀಯರಿಗೆ ತೊಂದರೆ ಕೊಟ್ಟಿದ್ದರಿಂದ ಯಾರೋ ಕಟ್ಟಿ ಹಾಕಿದ್ದಾರೆ ಎಂಬ ಅನುಮಾನ ಹುಟ್ಟುತ್ತಿತ್ತು. ಪೊಲೀಸರ ವಿಚಾರಣೆ ವೇಳೆ ಸಯ್ಯದ್ ಹೇಳಿದ್ದು ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಕಾಲಿಗೆ ಸರಪಳಿ ಸುತ್ತಿ ಮರಕ್ಕೆ ಬೀಗ ಹಾಕಿಕೊಂಡಿದ್ದು ನಾನೇ. ಬೀಗ ಹಾಕಿದ ಬಳಿಕ ಬೀಗದ ಕೀಲಿ ಬಿಸಾಡಿದ್ದೇನೆ. ನಾನು ಹೀಗೆ ಮಾಡುವುದರಿಂದ ನನ್ನ ಫೋಟೊ ಮತ್ತು ಹೆಸರು ಪೇಪರ್, ಟಿವಿಗಳಲ್ಲಿ ಬರುತ್ತೆ. ಪೊಲೀಸರು ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾರೆ. ಈ ಹಿಂದೆಯೂ ನಾನು ಮೂರು ಬಾರಿ ಹೀಗೆ ಮಾಡಿಕೊಂಡಿದ್ದೇನೆ. ಕಣ್ಣೂರಿನಲ್ಲಿಯೂ ಒಮ್ಮೆ ಹೀಗೆ ಮಾಡಿಕೊಂಡಿದ್ದೇನೆ ಎಂದು ಸಯ್ಯದ್ ಠಾಣಾಧಿಕಾರಿ ಮುಂದೆ ಹೇಳಿಕೊಂಡಿದ್ದಾನೆ.

ಎರಡು ಮೂರು ಬಾರಿ ಹೀಗೆಯೇ ಮಾಡಿಕೊಂಡಿದ್ದಾನೆ. ಪೊಲೀಸರು ಫೋನ್ ಮಾಡಿದ ಬಳಿಕ ನಮ್ಮ ಗಮನಕ್ಕೆ ಬಂದಿದ್ದು, ಠಾಣೆಗೆ ಹೋಗಿ ಕರೆದುಕೊಂಡು ಬಂದಿದ್ದೇವೆ. ಇದೀಗ ಇಲ್ಲಿಯೂ ಹೀಗೆ ಮಾಡಿಕೊಂಡಿದ್ದಾನೆ. ಈಗಲೂ ಕರೆದುಕೊಂಡು ಮನೆಗೆ ಬಿಟ್ಟರೆ ಮತ್ತೆ ಬೇರೆಲ್ಲಾದರೂ ಹೋಗುತ್ತಾನೆ.
ಸಯ್ಯದ್ ಮನೆಯವರು.

 

Comments are closed.