ಕರಾವಳಿ

ಕನ್ನಗುಡ್ಡೆಯಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಕಾಮತ್‌ರಿಂದ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 51 ನೇ ಅಳಪೆ ಉತ್ತರ ವಾರ್ಡಿನ ಕನ್ನಗುಡ್ಡೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.

ಈ ಬಗ್ಗೆ ಮಾತನಾಡಿದ ಶಾಸಕ ಕಾಮತ್ ಅವರು 2018-19 ನೇ ಸಾಲಿನ ಅಲ್ಪಸಂಖ್ಯಾತರ ಕಾಲೋನಿ ಮೂಲ ಸೌಕರ್ಯ ಅಭಿವೃದ್ಧಿ ಅನುದಾನದ ಅಡಿಯಲ್ಲಿ ಸುಮಾರು 4.72 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವುದು. ಕನ್ನಗುಡ್ಡೆಯ ಡೋಲ್ಫಿ ಡಿಸೋಜಾ ಅವರ ಮನೆಯ ಬಳಿಯಿಂದ ಕಾಮಗಾರಿ ನಡೆಯಲಿದೆ. ಈ ಭಾಗದ ಜನರು ರಸ್ತೆ ಸರಿಯಾಗಿರದೇ ಅನೇಕ ವರ್ಷಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದರು. ಆ ಸಮಸ್ಯೆ ಇನ್ನು ಬಗೆಹರಿಯಲಿದೆ ಎಂದು ತಿಳಿಸಿದರು.

ಶಾಸಕರು ಸ್ಥಳೀಯ ನಾಗರಿಕ ಡೋಲ್ಫಿ ಡಿಸೋಜಾ ಅವರಿಂದ ತೆಂಗಿನಕಾಯಿ ಒಡೆದು ಶುಭ ಹಾರೈಸಿದರು. ಶಾಸಕರೊಂದಿಗೆ ಸ್ಥಳೀಯ ಮನಪಾ ಸದಸ್ಯ ಬಿ ಪ್ರಕಾಶ್, ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ನರೇಶ್, ಶರಣ್, ದೀಕ್ಷಿತ್, ಶಶಿಕಲಾ, ಗೀತಾ ಶೆಟ್ಟಿ, ಪ್ರವೀಣ್, ಪದ್ಮನಾಭ ಕಣ್ಣಗುಡ್ಡೆ, ದೀವರಾಜ್, ಸಂಕಪ್ಪ ಶೆಟ್ಟಿ ಉಪಸ್ಥಿತರಿದ್ದರು

Comments are closed.