ಕರಾವಳಿ

ರಸ್ತೆ ಅಪಘಾತ: ಮಗುವಿನ ನಾಮಕರಣಕ್ಕಾಗಿ ಸಿಂಗಾಪೂರ್‌ನಿಂದ ಬಂದಿದ್ದ ತಂದೆ ಸಾವು

Pinterest LinkedIn Tumblr

ಕುಂದಾಪುರ: ಇನ್ಸುಲೇಟರ್ ವಾಹನ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಡಿಕಿಯಲ್ಲಿ ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಟ್ರಾನ್ಸ್‌‌ಪೋರ್ಟ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಕುಂದಾಪುರ ತಾಲೂಕು ಕೋಟೇಶ್ವರದ ಮಾರ್ಕೋಡು ಸ್ವಾಗತ್ ರಸ್ತೆ ನಿವಾಸಿ ವಿವೇಕಾನಂದ ಎಸ್‌. ಕೆ. ಮೃತ ದುರ್ದೈವಿ.

ಘಟನೆ ವಿವರ: ಸಿಂಗಾಪೂರ್‌ನಲ್ಲಿ ಉದ್ಯಮ ನಡೆಸಿಕೊಂಡಿದ್ದ ವಿವೇಕಾನಂದ ನಿವ್ರತ್ತ ತಹಶಿಲ್ದಾರ್ ಶಂಕರನಾರಾಯಣ ಎನ್ನುವರ ಪುತ್ರ. ಇತ್ತೀಚೆಗಷ್ಟೇ ಊರಿಗೆ ಬಂದಿದ್ದ ಅವರು ಹದಿನೈದು ದಿನಗಳ ಹಿಂದೆ ವಾಪಾಸ್ಸಾಗಿದ್ದರು. ಒಂದೆರಡು ದಿನಗಳ ಹಿಂದೆ ತನ್ನ ಮಗುವಿನ ನಾಮಕರಣಕ್ಕಾಗಿ ಊರಿಗೆ ಮರಳಿ ಬಂದಿದ್ದರು. ಗುರುವಾರ ಸಂಜೆ ಸುಮಾರಿಗೆ ನಾಮಕರಣದ ತಯಾರಿ ಸಲುವಾಗಿ ಪೇಟೆಗೆ ತೆರಳಿ ವಾಪಾಸ್ ಮನೆಗೆ ಮರಳುತ್ತಿದ್ದಾಗ ಇನ್ಸುಲೇಟರ್ ವಾಹನ ಹಿಂಬದಿಯಿಂದ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ರಸ್ತೆಗೆ ಬಿದ್ದ ವಿವೇಕಾನಂದ ಅವರ ತಲೆ ಮೇಲೆ ಇನ್ಸುಲೇಟರ್ ವಾಹನದ ಚಕ್ರ ಹಾದುಹೋಗಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.