ಮಂಗಳೂರು. ಕನ್ನಡ ಕೈರಳಿ ಪ್ರಕಾಶನದ ಹನ್ನೆರಡನೇ ವಾರ್ಷಿಕೋತ್ಸವ ಹಾಗೂ ಕಾಸರಗೋಡು ಸಿರಿಗನ್ನಡ ಸಾಹಿತಿಗಳ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಅವರನ್ನು ಸಮ್ಮಾನಿಸಲಾಯಿತು.
ಶುಕ್ರವಾರ ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಕೇಂದ್ರ ಸರಕಾರದ ಕುಡಿವ ನೀರು , ನೈರ್ಮಲ್ಯ ಖಾತೆ ಸಚಿವರಾದ ಶ್ರೀ ರಮೇಶ್ ಜಿಗಜಿಣಗಿ ಇವರು ಎಸ್.ಜಗದೀಶ್ಚಂದ್ರ ಅಂಚನ್ ಅವರನ್ನು ಸನ್ಮಾನಿಸಿದರು .
ಕಳೆದ 27 ವರ್ಷಗಳಿಂದ ಕ್ರೀಡಾ ಬರವಣಿಗೆ ಮೂಲಕ ವಿವಿಧ ಪತ್ರಿಕೆಗಳಲ್ಲಿ ಗುರುತಿಸಿಕೊಂಡು ಹಲವಾರು ಪ್ರಶಸ್ತಿಗಳ ಜೊತೆಗೆ 2016ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , 2018ರ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿಯನ್ನು ಜಗದೀಶ್ಚಂದ್ರ ಪಡೆದು ಕೊಂಡಿದ್ದಾರೆ . ಇವರು ಬರೆದ 3500ಕ್ಕೂ ಹೆಚ್ಚು ಕ್ರೀಡಾ ಬರವಣಿಗೆಯ ಸಾಧನೆಯನ್ನು ಗುರುತಿಸಿ , ಕನ್ನಡ ಕೈರಳಿ ಪ್ರಕಾಶನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲು , ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರಾ , ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಕರಾದ ಶ್ರೀ ಸದಾನಂದ ಪೆರ್ಲ , ಗಡಿನಾಡ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಕಲ್ಲೂರಾಯ , ನ್ಯಾಯವಾದಿ ಶ್ರೀ ಗಂಗಾಧರ್ ಉಳ್ಳಾಲ್ , ಶ್ರೀ ಎಂ.ಬಿ.ಸದಾಶಿವ , ಶ್ರೀ ಎ.ಆರ್.ಸುಬ್ಬಯ್ಯಕಟ್ಟೆ, ಅಖಿಲೇಶ್ ನಗುಮುಖಂ ಹಾಗೂ ರವಿ ನಾಯ್ಯಾಪು ಮೊದಲಾದವರು ಉಪಸ್ಥಿತರಿದ್ದರು.
Comments are closed.