ಉಡುಪಿ: ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಮಂಗನ ಖಾಯಿಲೆಗೆ ತುತ್ತಾಗಿರುವ ಜನರನ್ನು ಭೇಟಿ ಮಾಡಿದರು.ಕೆಲ ರೋಗಿಗಳು ಕೆ.ಎಂ.ಸಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನೇರವಾಗಿ ತಾವೇ ತೆರಳಿ ಆರೋಗ್ಯ ವಿಚಾರಿಸಿ ನಂತರ ಮೆಡಿಕಲ್ ಸೂಪರಿಂಟೆಂಡೆಂಟ್ ಅವಿನಾಶ್ ಶೆಟ್ಟಿ,ವೈದ್ಯರು ಹಾಗೂ ಸಿಬ್ಬಂದಿಗಳ ಜೊತೆ ಚರ್ಚಿಸಿದರು.
ರೋಗಿಗಳಿಗೆ ಯಾವುದೇ ತೊಡಕುಂಟಾಗದಂತೆ ನೋಡಿಕೊಳ್ಳಿ, ಸರಕಾರದ ವತಿಯಿಂದ ಯಾವುದೇ ಸಹಕಾರಕ್ಕೂ ನಾವು ಸಿದ್ದರಿದ್ದೇವೆ ಎಂದು ಶಾಸಕರು ತಿಳಿಸಿದರು.ಹಾಗೂ ರೋಗಿಗಳ ಸಂಬಂಧಿಕರಿಗೆ ಇಂದಿರಾ ಕ್ಯಾಂಟೀನ್ ನಿಂದಲೇ ಆಹಾರ ಒದಗಿಸುವಂತೆ ಸೂಚಿಸಿದರು. ಬಹುತೇಕ ರೋಗಿಗಳು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.
Comments are closed.