ಕರಾವಳಿ

ಬೈಂದೂರಿನಲ್ಲಿ ಲಘು ಭೂ ಕಂಪನ; ಆತಂಕಗೊಂಡಿದ್ದಾರೆ ಜನ!

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕಿನ ಗಂಗನಾಡು, ಮದ್ದೋಡಿಯಲ್ಲಿ ಶುಕ್ರವಾರ ಲಘುವಾಗಿ ಕಂಪಿಸಿದ ಅನುಭವವಾಗಿದೆ.

ಸಾರಂಕಿ, ಕುಳ್ಳಂಕಿ, ಅತ್ಯಾಡಿ, ಗೋಳಿ ಬೇರು, ಮದ್ದೋಡಿ, ಕ್ಯಾರ್ತೂರ್ ಮುಂತಾದ ಕಡೆಗಳಲ್ಲಿ ಭೂಮಿ ಸುಮಾರು 10 ಸೆಕೆಂಡ್ ಕಾಲ ಕಂಪಿಸಿದೆ ಎಂದು ಆ ಭಾಗದ ಜನರು ಹೇಳಿದ್ದಾರೆ.

ಅತ್ಯಾಡಿ ಶಾಲೆಯ ಬಾಗಿಲಿನ ಬೀಗ ಅಲುಗಾಡಿದೆ, ಗೋಳಿಬೇರಿನ ಮನೆಯ ಗೋಡೆಯೊಂದು ಸ್ವಲ್ಪ ಬಿರುಕುಬಿಟ್ಟಿದೆ. ಬಹುತೇಕ ಮನೆಗಳಲ್ಲಿ ಪಾತ್ರೆಗಳು ನೆಲಕ್ಕೆ ಬಿದ್ದ ತತ್‌ಕ್ಷಣ ಗಾಬರಿಗೊಂಡ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಸ್ಥಳಕ್ಕೆ ಬೈಂದೂರು ತಹಶೀಲ್ದಾರ್‌ ಕಿರಣ್‌ ಗೌರಯ್ಯ ಬೇಟಿ ನೀಡಿದ್ದಾರೆ.

Comments are closed.