ಕರಾವಳಿ

ರಾಜ್ಯ ಹೆದ್ದಾರಿಗೂ ಟೋಲ್: ಡಿ.20ಕ್ಕೆ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ ಬಂದ್‌

Pinterest LinkedIn Tumblr

ಉಡುಪಿ: ರಾಜ್ಯ ಹೆದ್ದಾರಿಯಲ್ಲಿ ಬೆಳ್ಮಣ್‌ ಟೋಲ್‌ಗೇಟ್‌ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರಕಿರುವ ಹಿನ್ನೆಲೆಯಲ್ಲಿ ಟೋಲ್‌ ವಿರೋದಿ ಸಮಿತಿಯ ನೇತೃತ್ವದಲ್ಲಿ ಮತ್ತೆ ಹೋರಾಟ ನಡೆಸಲು ನಿರ್ದರಿಸಿದ್ದು, ಡಿ.20ರಂದು ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ದಾರಿ ಬಂದ್‌ ಗೆ ಕರೆ ನೀಡಿದೆ.

ಅಂದು ಬೆಳಿಗ್ಗೆ 9ಕ್ಕೆ ಬೆಳ್ಮಣ್‌ ಬಸ್ಸು ನಿಲ್ದಾಣದ ಬಳಿ ಬ್ರಹತ್‌ ಪ್ರತಿಭಟನಾ ಸಭೆ ನಡೆಯಲಿದ್ದು ಪಡುಬಿದ್ರಿಯಿಂದ ಕಾರ್ಕಳದವರೆಗಿನ ಹೆದ್ದಾರಿಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಹಕರಿಸುವುದರ ಜತೆ ಉದ್ಯಮಿಗಳು ಹಾಗೂ ನಾಗರಿಕರು ಸಂಪೂರ್ಣ ಬೆಂಬಲ ನೀಡಬೇಕು ಎಂದು ಟೋಲ್‌ಗೇಟ್‌ ವಿರೋಧಿ ಸಮಿತಿ ತಿಳಿಸಿದೆ.

Comments are closed.