ಕರಾವಳಿ

ರಂಗಚಾವಡಿ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಸೌರಭ ಕಾರ್ಯಕ್ರಮ : ಎ.ಕೆ. ವಿಜಯ್‌ಗೆ ರಂಗ ಚಾವಡಿ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು: ರಂಗ ಚಾವಡಿ ಸಾಹಿತ್ಯಿಕ-ಸಾಂಸ್ಕೃತಿಕ ಸಂಘಟನೆ ಕಳೆದ 20 ವರ್ಷಗಳಲ್ಲಿ ಉತ್ತಮ ಕಲಾ ಸೇವೆ ಮಾಡಿದೆ. ಬಹಳಷ್ಟು ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ರಂಗ ಚಾವಡಿಯ ಕಾರ್ಯ ಶ್ಲಾಘನೀಯ. ಸಮಾಜದಲ್ಲಿ ಉತ್ತಮ ಸೇವೆ ಮಾಡುವ ಸಾಧಕರು ಬಹಳಷ್ಟಿದ್ದಾರೆ ಎಂದು ಭವಾನಿ ಶಿಪ್ಪಿಂಗ್ ಸರ್ವಿಸಸ್ ಫ್ರೈ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಕುಸುಮೋದರ ಡಿ ಶೆಟ್ಟಿ ಚೆಲ್ಲಡ್ಕ ಹೇಳಿದರು. ಅವರು ಸುರತ್ಕಲ್ ಬಂಟರ ಭವನದಲ್ಲಿ ನಡೆದ ರಂಗಚಾವಡಿ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಸೌರಭವನ್ನು ಉದ್ಘಾಟಿಸಿ ಮಾತನಾಡಿದರು.

ಸಂಘಟನೆಯ ಬೆಳವಣಿಗೆಯ ಹಿಂದೆ ಉತ್ತಮ ಉದ್ದೇಶ, ಗುರಿ ಇರು ತ್ತದೆ. ತುಳು ರಂಗ ಭೂಮಿ ಬೆಳವಣಿಗೆ ಮತ್ತು ಸಾಧಕರನ್ನು ಹುಡುಕಿ ಗುರುತಿಸುವ ಕಾರ್ಯ ರಂಗ ಚಾವಡಿ ಮಾಡುತ್ತಿದೆ. ತುಳು ಭಾಷೆ, ಸಾಹಿತ್ಯದ ಹಿಂದೆ ಉತ್ತಮ ಕೆಲಸ ಮಾಡಿದರೆ ಮಾತ್ರ ರಂಗಭೂಮಿ ಬೆಳವಣಿಗೆ ಸಾಧ್ಯ. ಆ ಕೆಲಸವನ್ನು ಒಗ್ಗಟ್ಟಿನಿಂದ ಮಾಡ ಬೇಕಾಗಿದೆ ಎಂದವರು ತಿಳಿಸಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, ತುಳುಭಾಷೆ ಪ್ರಸಿದ್ದಿಗೆ ನಾಟಕ ರಂಗ ನೀಡಿದ ಕೊಡುಗೆ ಅನನ್ಯ. ಸಂಸ್ಥೆಗಳನ್ನು ದೊಡ್ಡ ಹಂತಕ್ಕೆ ಬೆಳೆಸಲು ಬಹಳಷ್ಟು ಕಷ್ಟವಿದೆ. ಸಮಾಜದಲ್ಲಿ ಗುರುತಿಸಬೇಕಾದ ಪ್ರತಿಭಾವಂತ ಜನರು, ಸಾಹಿತಿಗಳು, ಕಲಾವಿದರು ಬಹಳಷ್ಟು ಇದ್ದಾರೆ. ಆ ಕೆಲಸವನ್ನು ರಂಗ ಚಾವಡಿ ಸಂಘಟನೆ ಮಾಡು ತ್ತಿದೆ.

10 ವರ್ಷದ ಹಿಂದಿನ ನಾಟ ಕಕ್ಕೂ ಈಗಿನ ನಾಟಕಕ್ಕೂ ವ್ಯತ್ಯಾಸ ಇದೆ. ವ್ಯತ್ಯಾಸ ಏನು ಎಂದು ನಾಟಕ ನೋಡಿದರೆ ಗೊತ್ತಾಗುತ್ತದೆ. ತುಳು ಸಾಹಿತ್ಯ ಅಕಾಡೆಮಿಯು ತುಳು ನಾಟಕ ಮತ್ತು ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ನೀಡಿದೆ. ಹಿಂದೆ ತುಳು ಭಾಷೆ ಮಾತ ನಾಡಲು ಸಂಕೋಚವಾಗುತ್ತಿತ್ತು. ಶಾಲೆಯಲ್ಲಿ ತುಳು ಮಾತನಾಡಿದರೆ ಬೆಂಚಿನ ಮೇಲೆ ನಿಲ್ಲಿಸುತ್ತಿದ್ದ ಕಾಲ ವೊಂದಿತ್ತು. ಈಗ ತುಳು ಶಿಕ್ಷಣ ವ್ಯವಸ್ಥೆ ಆಗಿದೆ ಎಂದರು.

ಅಧ್ಯಕ್ಷ ಸ್ಥಾನ ವಹಿಸಿದ್ದ ಚಲನ ಚಿತ್ರ ನಿರ್ಮಾಪಕ ಡಾ. ಸಂಜೀವ ದಂಡೆಕೇರಿ ಮಾತನಾಡಿ, ನಾನು ಬಯ್ಯಮಲ್ಲಿಗೆ ನಾಟಕ ಬರೆದು ೫೪ ವರ್ಷ ಸಂದಿದೆ. ಬಯ್ಯಮಲ್ಲಿಗೆ ನಾಟಕ ಈಗ ಐದು ಭಾಷೆಗಳಲ್ಲಿವೆ. ತುಳು ರಂಗಭೂಮಿ ಬೆಳವಣಿಗೆ ನನ್ನ ಗುರಿ ಯಾಗಿದೆ. ತುಳು ರಂಗ ಭೂಮಿ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು. ಈ ಸಂದರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಕೆ. ವಿಜಯ್ ಅವರಿಗೆ ರಂಗ ಚಾವಡಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ರಂಗನಟ ವಿ.ಜಿ. ಪಾಲ್ ಪ್ರಾಸ್ತಾ ವಿಕವಾಗಿ ನುಡಿದರು. ಕಾರ್ಯಕ್ರಮ ದಲ್ಲಿ ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಚಲನಚಿತ್ರ ನಿರ್ಮಾಪಕ ರವಿ ರೈ ಕಳಸ, ಉದ್ಯಮಿ ರಮಾನಾಥ ಶೆಟ್ಟಿ ಕೃಷ್ಣಾಪುರ, ಕ್ಯಾಟ್ಕಾ ಅಧ್ಯಕ್ಷ ಪಮ್ಮಿ ಕೊಡಿಯಾಲ್ ಬೈಲ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ ಹೊಸಬೆಟ್ಟು, ಗಿರೀಶ್ ಎಂ ಶೆಟ್ಟಿ ಕಟೀಲು, ಸತೀಶ್ ಮುಂಚೂರು, ಎಂ. ದೇವಾನಂದ ಶೆಟ್ಟಿ, ಡಿವೈ‌ಎಸ್‌ಪಿ ಪಡ್ರೆ ದಿನಕರ ಶೆಟ್ಟಿ, ಕಾರ್ಪೋರೇಟರ್ ಅಶೋಕ್ ಶೆಟ್ಟಿ ಸುರತ್ಕಲ್, ರಂಗ ಚಾವಡಿ ಸಂಚಾಲಕ ಜಗನ್ನಾಥ್ ಶೆಟ್ಟಿ ಬಾಳ ಉಪಸ್ಥಿತರಿದ್ದರು.

ಬಿಂದಿಯಾ ಶೆಟ್ಟಿ ಪ್ರಾರ್ಥಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಳಿಕ ತುಳುವೆರೆ ತುಡರ್ ಜೋಡುಕಲ್ಲು ಕಲಾವಿದರಿಂದ ಡಾ. ಸಂಜೀವ ದಂಡೆಕೇರಿ ರಚಿಸಿದ ಬಯ್ಯಮಲ್ಲಿಗೆ ತುಳುನಾಟಕ ಸುರೇಶ್ ಶೆಟ್ಟಿ ಜೋಡುಕಲ್ಲು ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟಿತು.

Comments are closed.