ಕರಾವಳಿ

‘ಪ್ರಕೃತಿಯನ್ನೂ ನನ್ನ ಹಾಗೆ, ಪೂಜಿಸಿ’; ಕೋಡಿಯಲ್ಲಿ ಪ್ರಕೃತಿ ಗಣೇಶ!

Pinterest LinkedIn Tumblr

ಕುಂದಾಪುರ: ಪ್ರಕೃತಿ ವಿಕೋಪದಡಿಯಲ್ಲಿ ಈತ್ತೀಚೆಗೆ ಸಂಭವಿಸಿದ ಕೊಡಗು ಮತ್ತು ಕೇರಳದ ಘಟನೆಯನ್ನೇ ಆಧಾರವನ್ನಾಗಿಸಿ ಗಣೇಶ ಚತುರ್ಥಿಯ ಅಂಗವಾಗಿ ಕೋಟೇಶ್ವರ ಹಳೆ-ಅಳಿವೆ ಕೋಡಿ ಬೀಚ್ ನಲ್ಲಿ ರಚಿಸಿದ ಮರಳು ಶಿಲ್ಪ ಎಲ್ಲರನ್ನೂ ಆಕರ್ಷಿಸುತ್ತಿದೆ.

ನನ್ನಂತಹ ದೇವರನ್ನು ಹೇಗೆ ಶ್ರದ್ಧಾ, ಭಯ, ಭಕ್ತಿ, ಮುತುವರ್ಜಿಯಿಂದ ಪೂಜಿಸುವಿರೋ ಹಾಗೆ ಪ್ರಕೃತಿಯನ್ನು ಪೂಜಿಸಿ ಎಂದು ಗಣಪತಿಯು ನೆರೆಯ ಪಾಲಾದ ಪ್ರಕೃತಿಯ ದೃಶ್ಯದೊಂದಿಗೆ ‘ಪ್ರಕೃತಿಯನ್ನೂ ನನ್ನ ಹಾಗೆ, ಪೂಜಿಸಿ’ ಎಂಬ ಸಂದೇಶವನ್ನು ಸಾರುವ ಕಲಾಕೃತಿ ಇದಾಗಿದೆ.

ಸ್ಯಾಂಡ್ ಥೀಂ, ಉಡುಪಿ ತಂಡವು ಕಲಾವಿದ ಹರೀಶ್ ಸಾಗಾ ನೇತೃತ್ವದಲ್ಲಿ ರಾಘವೇಂದ್ರ, ಜೈ ನೇರಳೆಕಟ್ಟೆ, ಪ್ರಸಾದ್ ಆರ್. 10X4.5 ಚದರ ಅಡಿಯ ಮರಳಿನ ಶಿಲ್ಪ ರಚಿಸಿದ್ದಾರೆ.

Comments are closed.