ಕರಾವಳಿ

ಕಿವಿನೋವು ಹಾಗೂ ಕ್ಷಯರೋಗ ನಿವಾರಣೆಗೆ ಅಮಟೆ ಹಣ್ಣು ಸಹಕಾರಿ

Pinterest LinkedIn Tumblr

ಹೌದು ನೀವು ಅಮಟೆ ಹಣ್ಣಿನ ಬಗ್ಗೆ ತಿಳಿದುಕೊಳ್ಳಿ ಇದು ಒಂದು ಮರ, ಹೂಬಿಡುವ ಸಸ್ಯದ ಒಂದು ಮರ. ಇದನ್ನು ಅಪರೂಪವಾಗಿ ಕೃಷಿ ಮಾಡಲಾಗುತ್ತದೆ. ಬಲಿತ ಹಣ್ಣು ದಪ್ಪ ತೊಗಲು ಮತ್ತು ತಿರುಳಿನ ತೆಳುವಾದ ಪದರವನ್ನು ಹೊಂದಿರುತ್ತದೆ.

ಇದರ ಉಪಯೋಗಗಳು:
೧. ಅಮಟೆ ಹಣ್ಣಿನ ರಸವನ್ನು ಕಿವಿನೋವಿಗೆ ಹಾಗೂ ಕ್ಷಯರೋಗ ನಿವಾರಣೆಗೆ ಉಪಯೋಗಿಸುತ್ತಾರೆ. ಅಮಟೆ ಹಣ್ಣಿನ ರಸವನ್ನು ನಿಮ್ಮ ಕಿವಿ ನೋವು ಕಾಣಿಸಿಕೊಂಡಲ್ಲಿ ನಿಮ್ಮ ಕಿವಿಗೆ ಸ್ವಲ್ಪ ಅಮಟೆ ಹಣ್ಣಿನ ರಸವನ್ನು ಬಿಟ್ಟರೆ. ನಿಮ್ಮ ಕಿವಿ ನೋವು ಮಾಯವಾಗುತ್ತದೆ. ಇದನ್ನು ಸೆವೆಸುವುದರಿಂದ ಕ್ಷಯರೋಗವನ್ನು ತಡೆಗಟ್ಟಬಹುದು.

೨. ತೊಗಟೆಯನ್ನು ಬಂಧಕದಂತೆ ಭೇದಿಗೆ, ಆಮಶಂಕೆಗೆ, ವಾಂತಿ ತಡೆಯಲು ಹಾಗೂ ಸಂಧುನೋವಿಗೆ ಬಳಸುತ್ತಾರೆ. ಇನ್ನು ಇದರ ತೊಗಟೆಯನ್ನು ಬಳಸುವುದರಿಂದ ಭೇದಿ ಆಗುವುದನ್ನು ನಿಲ್ಲಿಸಬಹುದು. ಮತ್ತು ಆಮಶಂಕೆ ಭೇದಿ ಮತ್ತು ವಾಂತಿ ಹಾಗು ಸಂದುನೋವಿಗೆ ಬಳಸಲಾಗುತ್ತದೆ.

ತಿನ್ನಲು ಗೊಜ್ಜು ಮಾಡಬಹುದು:
ಈ ಅಮಟೆ ಕಾಯಿ ತೊಳೆದು ಬೇಯಿಸಿ, ಅರಿದ ನಂತರ ಮಸೆದು ಬೆಲ್ಲ, ಉಪ್ಪು, ಖಾರದಪುಡಿ ಅಥವಾ ಹಸಿಮೆಣಸಿನಕಾಯಿ ಅರೆದು ಸೇರಿಸಿ ಮೊಸರು ಹಾಕಿ ಕುದಿಸಿ, ಒಗ್ಗರಣೆ ಹಾಕಿದ್ರೆ ಸವಿಯಲು ಸಿದ್ಧವಾಗಿರುತ್ತೆ.

ಅಮಟೆ-ಸಾಸಿವೆ ಗೊಜ್ಜು ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
6 ಎಳೆಯ ಅಮಟೆಕಾಯಿ, ಅರ್ಧ ಕಪ್ ಕಾಯಿತುರಿ, 8 ಬ್ಯಾಡಗಿ ಮೆಣಸು, 2ಚಿಟಿಕಿ ಇಂಗು, 6 ಕಡಲೆಬೀಜ, 2 ಟಿ.ಚ. ಸಾಸಿವೆ, ಮೂರು ಚಮಚ ಎಣ್ಣೆ, ಅರಸಿನ ಹುಡಿ ಸ್ವಲ್ಪ ಮತ್ತು ರುಚಿಗೆ ಉಪ್ಪು.

ತಯಾರಿಸುವ ವಿಧಾನ:
ಅಮಟೆಕಾಯಿಯನ್ನು ತುರಿಯಿರಿ. ಮೆಣಸನ್ನು ಸಣ್ಣಕ್ಕೆ ಹೆಚ್ಚಿಡಿ. ಕಾಯಿತುರಿ, ಅಮಟೆಕಾಯಿ, ಇಂಗು, ಮೆಣಸು, ಕಲ್ಲುಪ್ಪು, ಸಾಸಿವೆ, ಮತ್ತು ಅರಸಿನ ಸೇರಿಸಿ ನೀರು ಹಾಕಿ ರುಬ್ಬಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಕಡಲೆಕಾಯಿಯನ್ನು ಹಾಕಿ ಹುರಿಯಿರಿ. ಅನಂತರ ರುಬ್ಬಿಕೊಂಡ ಅಮಟೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಬಾಡಿಸಿ, ಇಳಿಸಿ. ಇದನ್ನು ಅನ್ನದೊಂದಿದೆ ಸವಿಯಲು ತುಂಬಾ ರುಚಿಯಾಗಿರುತ್ತದೆ.

Comments are closed.