ಕರಾವಳಿ

ಸುವಾಸನೆಯಿಂದಲೇ ಗಮನ ಸೆಳೆಯುವ ಈ ಹೂವಿನ ಎಲ್ಲ ಭಾಗವೂ ಆರೋಗ್ಯಕ್ಕೆ ಒಳ್ಳೆದು …!

Pinterest LinkedIn Tumblr

ಎಲ್ಲರಿಗೂ ಚಿರಪರಿಚಿತವಾದ ಕೇದಿಗೆ ಹೂವೆಂದರೆ ನಾಗರಹಾವುಗಳಿಗೆ ಪಂಚಪ್ರಾಣ. ಮಹಾಶಿವರಾತ್ರಿ ದಿನದೊಂದು ಶಿವನ ಪುಷ್ಪಾರ್ಚನೆಗೆ ಈ ಹೂವು ತುಂಬಾ ಶ್ರೇಷ್ಠ. ಕೇದಿಗೆ ಹೂವು ಪೂಜೆಗೆ, ಹೆಂಗಸರು ಮುಡಿದುಕೊಳ್ಳಲು ಮಾತ್ರ ಸೀಮಿತವಲ್ಲ, ಇದನ್ನು ಔಷಧವಾಗಿಯೂ ಕೂಡ ಉಪಯೋಗಿಸಬಹುದು. ಸುವಾಸನೆಯಿಂದಲೇ ಗಮನ ಸೆಳೆಯುವ ಇದರ ತೆನೆ, ಪಕಳೆ, ಬೇರು ಎಲ್ಲವೂ ಆರೋಗ್ಯ ರಕ್ಷಣೆಯ ಕೆಲಸ ಮಾಡುತ್ತವೆ.

ಕೇದಿಗೆಯ ಉಪಯೋಗಗಳು.
ಕೇದಿಗೆ ಹೂವು ಅಷ್ಟೇ ಅಲ್ಲ ಇದರ ಎಲೆಗಳು ಖಾರವಾಗಿರುವುದರಿಂದ, ಕುಷ್ಠರೋಗ ಮತ್ತು ಕೆಲವು ಅಂಟು ರೋಗಗಳನ್ನು ವಾಸಿ ಮಾಡಲು ಉಪಯೋಗಿಸುತ್ತಾರೆ.
ನಿದ್ರಾಜನಕವಾಗಿ ಮತ್ತು ಕಫದ ನಿವಾರಣೆಗೆ ಕೇದಿಗೆಯನ್ನು ಉಪಯೋಗಿಸುತ್ತಾರೆ.
ಕೇದಿಗೆ ಪತ್ರದ ತೈಲವನ್ನು ಪಾಂಡು ರೋಗ, ಹೃದ್ರೋಗ, ಮೆದುಳು ರೋಗ ಮತ್ತು ತಂಪಿಗೆ ಉಪಯೋಗಿಸುತ್ತಾರೆ.
ಕೇದಿಗೆಯ ಪತ್ರಕದ ತೈಲವನ್ನು ಸ್ನಾಯು ಸೆಳೆತ, ತಲೆ ನೋವು, ನರಗಳ ದೌರ್ಬಲ್ಯತೆ ಹೋಗಲಾಡಿಸಲು ಉಪಯೋಗಿಸುತ್ತಾರೆ. ಬೇರಿನ ತೈಲವನ್ನು ಕೆಲವು ಔಷಧಿಯುಕ್ತ ಎಣ್ಣೆಗಳಲ್ಲಿ ಉಪಯೋಗಿಸುತ್ತಾರೆ.
ಕೇದಿಗೆ ಬೇರನ್ನು ಅಕ್ಕಿ ತೊಳೆದ ನೀರಿನಲ್ಲಿ ತೇದು ಸೇವಿಸಿದರೆ ಹೆಣ್ಣು ಮಕ್ಕಳಲ್ಲಿ ಕಾಡುವ ಮಾಸಿಕ ಅಧಿಕ ರಕ್ತಸ್ರಾವವು ಕಡಿಮೆಯಾಗುತ್ತದೆ.
ಅಜೀರ್ಣ, ಭೇದಿ ಸಮಸ್ಯೆಯಿಂದ ಬಳಲುತ್ತಿದ್ದರೆ ಕೇದಿಗೆಯ ತೆನೆಯನ್ನು ಸಕ್ಕರೆ ಮತ್ತು ತುಪ್ಪದೊಂದಿಗೆ ಸೇವಿಸಿ. ಭೇದಿ ನಿಲ್ಲುತ್ತದೆ ಮತ್ತು ಜೀರ್ಣಶಕ್ತಿ ಹೆಚ್ಚಾಗುತ್ತದೆ.
ಕೇದಿಗೆ ಹೂವಿನ ಪಕಳೆಗಳನ್ನು ಒಣಗಿಸಿ ಸುಟ್ಟು ಬೂದಿ ಮಾಡಬೇಕು. ಆ ಬೂದಿಯನ್ನು 1/2 ಚಮಚ ಹರಳೆಣ್ಣೆ ಮತ್ತು ಜೇನುತುಪ್ಪ ಕಲಸಿ ಸೇವಿಸಿದರೆ ಹೊಟ್ಟೆ ನೋವು ವಾಸಿಯಾಗುತ್ತದೆ.
ಕೇದಿಗೆ ಹೂಗಳನ್ನು ತಂದು ಎಳ್ಳೆಣ್ಣೆಯಲ್ಲಿ ಹಾಕಿ, ಮುಂದಾಗ್ನಿಯಿಂದ ಕಾಯಿಸುವುದು, ಎಣ್ಣೆತಣ್ಣಗಾದ ಮೇಲೆ ಬಟ್ಟೆಯಲ್ಲಿ ಶೋಧಿಸಿ ಸಂಗ್ರಹಿಸುವುದು, ತಲೆನೋವಿನಲ್ಲಿ ಹಣೆಗೆ ಹಚ್ಚುವುದು ಮತ್ತು ಶ್ವಾಸಕೋಶಗಳ ತೊಂದರೆಯಲ್ಲಿ ಎದೆಗೆ ಸವರುವುದು.ಈ ಎಣ್ಣೆಯನ್ನುಇಡೀ ಶರೀರಕ್ಕೆ ಹಚ್ಚುವುದರಿಂದ ನರಗಳು ಉತ್ತೇಜನಗೊಂಡು ಸೋಮಾರಿತನ ಮತ್ತು ಜಡತ್ವ ಪರಿಹಾರವಾಗುವುದು.
ಕೇದಿಗೆ ಗಿಡದ ಬಲಿತ ಬೇರು ತಂದು ನೀರಿನಲ್ಲಿ ತೇದು, ಸರ್ಪಕಚ್ಚಿರುವ ಕಡೆ ಪಟ್ಟು ಹಾಕುವುದು ಮತ್ತು ಅರ್ಧ ಟೀ ಚಮಚ ನೀರಿನಲ್ಲಿ ಕದಡಿ ಕುಡಿಯುವುದು. ಇದು ಸರ್ಪ ಕಚ್ಚಿದಾಗ ಪ್ರಥಮಚಿಕಿತ್ಸೆಯಾಗಿ ಈ ಉಪಚಾರ ಪರಿಣಾಮಕಾರಿ.

Comments are closed.