ಕರಾವಳಿ

ಮುಂಬಯಿಯಲ್ಲಿ ವಾಯ್ಸ್ ಆಫ್ ಬಿಲ್ಲವ…

Pinterest LinkedIn Tumblr

ಮುಂಬಯಿ : ಬಿಲ್ಲವರ ಅಸೋಷಿಯೇಷನ್ ಮುಂಬಯಿ ವತಿಯಿಂದ ಮುಂಬಯಿಯ ಬಿಲ್ಲವ ಭವನದಲ್ಲಿ ವಾಯ್ಸ್ ಆಫ್ ಬಿಲ್ಲವ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಬಿಲ್ಲವರ ಅಸೋಷಿಯೇಷನ್‌ನ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜನಪ್ರಿಯ ಸಂಗೀತ ಗುರು ನವೀನ್ ಚಂದ್ರ ಎನ್ ಸುವರ್ಣರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ವಾಯ್ಸ್ ಆಫ್ ಬಿಲ್ಲವ ಸ್ಪರ್ಧೆಯಲ್ಲಿ ಸಮಾಜದ ಅನೇಕ ಪ್ರತಿಭಾವಂತ ಗಾಯಕರು ಭಾಗವಹಿಸಿದ್ದರು. ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷರಾದ ಮನೋಜ್ ಸಿ ಪೂಜಾರಿಯವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ಬಿಲ್ಲವರ ಅಸೋಷಿಯೇಷನ್ ಮುಂಬಯಿ ಯ ಪದಾಧಿಕಾರಿಗಳು, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವರದಿ : ಈಶ್ವರ ಎಂ. ಐಲ್  / ಚಿತ್ರ : ದಿನೇಶ್ ಕುಲಾಲ್

Comments are closed.