ಮಂಗಳೂರು : ಜೆಪ್ಪು ಪರಿಸರದಲ್ಲಿ ಮಳೆಯಿಂದ ರಸ್ತೆ, ತೋಡು, ಒಳಚರಂಡಿಯಿಂದ ಸಮಸ್ಯೆಗೀಡಾದ ಸ್ಥಳಗಳಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುವಂತೆ ಸೂಚಿಸಿದರು.
ಈ ಸಂದರ್ಭ ಪಾಲಿಕೆ ಮಾಜಿ ಸದಸ್ಯ ಭಾಸ್ಕರ್ ಚಂದ್ರ ಶೆಟ್ಟಿ, ವಸಂತ ಜೆ ಪೂಜಾರಿ, ಭರತ್ ಕುಮಾರ್, ನವೀನ್ ಶೆಟ್ಟಿ, ದೇವಾನಂದ, ಸುರೇಖ, ಅಮಿತ, ಜನಾರ್ಧನ ಮತ್ತಿತರರು ಉಪಸ್ಥಿತರಿದ್ದರು.
Comments are closed.