ಕರಾವಳಿ

ಹತಾಷೆಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ದ ಅಪಪ್ರಚಾರ: ಹಾಲಾಡಿ ಪರ ಬೆಂಬಲಿಗರ ಬ್ಯಾಟಿಂಗ್

Pinterest LinkedIn Tumblr

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಪರ ಬೆಂಬಲಿಗರ ಬ್ಯಾಟಿಂಗ್ ಮಾಡಿದ್ದು ಹಾಲಾಡಿ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ. ಕುಂದಾಪುರದ ಆರ್ಡಿಯಲ್ಲಿರುವ ಮುಖಂಡ ಸಂತೋಷ ಕುಮಾರ್ ಶೆಟ್ಟಿ ಆರ್ಡಿ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ ಹಾಲಾಡಿ ಬೆಂಬಲಿಗರು ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಅಪಪ್ರಚಾರ ಮಾಡುವವರು ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೊದಲು ತಿಳಿಯಲಿ ಎಂದು ಸವಾಲ್ ಹಾಕಿದ್ದಾರೆ.

( ಹಾಲಾಡಿ ಶ್ರೀನಿವಾಸ ಶೆಟ್ಟಿ-File Photo)

ಕಳೆದ 20 ವರ್ಷಗಳಿಂದ ಶಾಸಕಾರಾಗಿ ಪ್ರಾಮಾಣಿಕವಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಕುಂದಾಪುರ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಬೇಕಾದ ಎಲ್ಲಾ ಕೆಲಸವನ್ನು ಮಾಡಿದ್ದಾರೆ. ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿ ಹಾಲಾಡಿ ವಿರುದ್ಧ ಅಸಮಾಧಾನದ ಹೊಗೆಯೆಂಬ ಮತ್ತು ಅವರು ಅಭಿವೃದ್ಧಿಗೆ ಒತ್ತು ನೀಡಿಲ್ಲ ಎಂಬುದು ಕೇವಲ ಅಪಪ್ರಚಾರದ ಮತ್ತು ವೈಯಕ್ತಿಕ ದ್ವೇಷ ಸಾಧನೆ ಹಾಗೂ ಷಡ್ಯಂತ್ರವಾಗಿದೆ. 94ಸಿ ಹಕ್ಕುಪತ್ರ ವಿತರಣೆ ಹಾಗೂ ಕಾರ್ಯಕರ್ತರನ್ನು ಹಾಲಾಡಿ ಕಡೆಗಣಿಸಿದ್ದಾರೆಂಬ ಆರೋಪದಲ್ಲೂ ಯಾವುದೇ ತೆರನಾದ ಹುರುಳಿಲ್ಲ.ಈ ಭಾಗದಲ್ಲಿ ಕೋಟಿಗೂ ಅಧಿಕ ಅಭಿವೃದ್ಧಿ ಕಾರ್ಯಗಳಾಗಿದೆ. ಕಾನೂನಾತ್ಮಕವಾಗಿ ಹಕ್ಕು ಪತ್ರವನ್ನು ವಿತರಣೆ ಮಾಡಲಾಗಿದೆ. ಕಾನೂನು ತೊಡಕಿರುವ ಕಾರಣ ಕೆಲವು ಕಡೆ ಹಕ್ಕು ಪತ್ರ ವಿತರಣೆ ಆಗಿಲ್ಲ. ಕಳೆದ ಬಾರಿ ಕುಂದಾಪುರ ತಾಲೂಕು ಪಂಚಾಯತ್ ಟಿಕೆಟ್ ಸಿಗದ ಬೇಸರದಲ್ಲಿ ಇಂತಹ ದ್ವೇಷ ರಾಜಕಾರಣವನ್ನು ಮಾಡಲಾಗುತ್ತಿದೆ. ರಾಜಕೀಯ ನೈತಿಕತೆ ಇಲ್ಲದೇ ಹತಾಷೆ ಮನೋಭಾವನೆಯಿಂದ ಇಂತಹ ಕೆಲಸ ಮಾಡುವ ಒಂದಿಬ್ಬರು ವ್ಯಕ್ತಿಗಳ ಹುನ್ನಾರ ಫಲಿಸುವುದಿಲ್ಲ. ಈ ಬಾರಿ ಹಾಲಾಡಿಯವರು ಪ್ರಚಂಡ ಬಹುಮತದೊಂದಿಗೆ ಗೆದ್ದು ಬರಲಿದ್ದಾರೆಂದು ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ಚಂದ್ರಶೇಖರ್ ಶೆಟ್ಟಿ ಹೇಳಿದ್ದಾರೆ.

ಹಾಲಾಡಿಯವರು ಏನೆಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ಈ ಬಾರಿ ದೊಡ್ಡ ಅಂತರದಲ್ಲಿ ಗೆಲ್ಲುವುದು ನಿಶ್ಚಿತ. ಹಾಲಾಡಿಯವರ ವಿಚಾರದಲ್ಲಿ ಯಾವುದೇ ಹುನ್ನಾರ ನಡೆಯುವುದಿಲ್ಲ. ಯಾವುದೇ ಪೊಲೀಸ್ ಪ್ರಕರಣಗಳಲ್ಲಿ ಹಾಲಾಡಿಯವರು ಹಸ್ತಕ್ಷೇಪ ಮಾಡಿಲ್ಲವಾದರೂ ವ್ರತಾ ಕೆಲವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಶ್ರೀನಿವಾಸ ಶೆಟ್ಟಿಯವರು ಕಾರ್ಯಕರ್ತರ ಜೊತೆ ಉತ್ತಮವಾಗಿದ್ದಾರೆ. ವೈಯಕ್ತಿಕ ದ್ವೇಷ ಸಾಧನೆಯಿಂದ ಅವರ ಬಗ್ಗೆ ಇಂತಹ ಹುನ್ನಾರ ನಡೆಯುತ್ತಿದೆ ಎಂದು ಮುಖಂಡ ವಿಜಯ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಹಲವಾರು ಮಂದಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Comments are closed.