ಕರಾವಳಿ

ಪಕ್ಷೇತರ ಅಭ್ಯರ್ಥಿ ಶ್ರೀಕರ್ ಪ್ರಭು ನಗರದ ದೈವ, ದೇವಸ್ಥಾನಗಳಿಗೆ ಭೇಟಿ : ಗೆಲುವಿಗಾಗಿ ಪ್ರಾರ್ಥನೆ

Pinterest LinkedIn Tumblr

ಮಂಗಳೂರು, ಎಪ್ರಿಲ್.26 : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯುವ ಮುಂದಾಳು, ಸಾಮಾಜಿಕ ನಾಯಕ ಆರ್ ಶ್ರೀಕರ್ ಪ್ರಭು ಅವರು ತಮ್ಮ ಧರ್ಮ ಪತ್ನಿ ಸೀಮಾ ಕಾಮಾತ್ ಅವರೊಂದಿಗೆ ಗುರುವಾರ ಬೆಳಿಗ್ಗೆ ನಗರದ ವಿವಿಧ ದೇವಸ್ಥಾನ ಹಾಗೂ ದೈವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ. ಆಶೀರ್ವಾದ ಪಡೆದರು.

ಮೊದಲಿಗೆ ನಗರದ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು, ಈ ಸಂದರ್ಭದಲ್ಲಿ ಅವರೊಂದಿಗೆ ಶ್ರೀಕರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಕೆ ಪಿ ಶೆಟ್ಟಿ ಬೇಡೆಮಾರ್, ಪ್ರದಾನ ಕಾರ್ಯದರ್ಶಿ ಪ್ರೇಮ ಚಂದ್ರ, ಸಂಚಾಲಕ ಅಶ್ವಿತ್ ಕುಮಾರ್ ಪದಾಧಿಕಾರಿಗಳಾದ ಅವಿನಾಶ್ ಶೆಟ್ಟಿ ನಾಗೇಶ್, ಶರತ್ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ನಗರದ ಲೇಡಿಹಿಲ್ ಸಮೀಪದ ಚಿಲಿಂಬಿಯಲ್ಲಿರುವ ಶ್ರೀ ಶಿರಡಿ ಸಾಯಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂದಿರದ ಮುಖ್ಯಸ್ಥರಾದ ವಿಶ್ವಾಸ್ ದಾಸ್ ಅವರು ಶ್ರೀಕರ್ ಅವರನ್ನು ಶಾಲು ಹೊದಿಸಿ ಅಭಿನಂದಿಸಿದರು. ಶ್ರೀಕರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಕೆ ಪಿ ಶೆಟ್ಟಿ ಬೇಡೆಮಾರ್ ಮತ್ತಿತರ ಅಭಿಮಾನಿಗಳು ಉಪಸ್ಥಿತರಿದ್ದರು.

ತದನಂತರ ಪುರಾಣ ಪ್ರಸಿದ್ಧ ಉರ್ವಾ ಮಾರಿಗುಡಿ ಕ್ಷೇತ್ರ, ಉರ್ವಾ ಕೊರಗಜ್ಜ ಗುಡಿ, ಬೋಳೂರು ಜಾರಾಂದಾಯ ದೈವಸ್ಥಾನ, ಭಗವತಿ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಮುಂತಾದ ಕ್ಷೇತ್ರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ. ಆಶೀರ್ವಾದ ಪಡೆದರು.

ಈ ಸಂದರ್ಭ ಶ್ರೀಕರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಕೆ ಪಿ ಶೆಟ್ಟಿ ಬೇಡೆಮಾರ್, ಪ್ರದಾನ ಕಾರ್ಯದರ್ಶಿ ಪ್ರೇಮ ಚಂದ್ರ, ಸಂಚಾಲಕ ಅಶ್ವಿತ್ ಕುಮಾರ್, ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ, ಅವಿನಾಶ್ ಶೆಟ್ಟಿ, ನಾಗೇಶ್, ಶರತ್ ಹಾಗೂ ಶ್ರೀಕರ್ ಪ್ರಭು ಅವರ ಅಪಾರ ಬೆಂಬಲಿಗರು ಹಾಗೂ ಅಭಿಮಾನಿಗಳು ಜೊತೆಗಿದ್ದರು.

Comments are closed.