ಕರಾವಳಿ

ಕುಂದಾಪುರದ ನೂತನ ಡಿವೈ‌ಎಸ್ಪಿ ಬಿ.ಪಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕಾರ

Pinterest LinkedIn Tumblr

ಕುಂದಾಪುರ: ಕುಂದಾಪುರ ಉಪವಿಭಾಗದ ನೂತನ ಡಿವೈ‌ಎಸ್ಪಿಯಾಗಿ ಬಿ.ಪಿ.ದಿನೇಶ್ ಕುಮಾರ್ ಅವರು ಡಿ‌ವೈಎಸ್ಪಿ ಕಚೇರಿಯಲ್ಲಿ ಬುಧವಾರ ನಿರ್ಗಮನ ಡಿವೈಎಸ್ಪಿ ಪ್ರವೀಣ್ ಹೆಚ್.ನಾಯ್ಕ್ ಅವರಿಂದ ಅಧಿಕಾರಿ ಸ್ವೀಕರಿಸಿದರು.

ದಿನೇಶ್ ಕುಮಾರ್ ಮಲ್ಪೆ ಠಾಣೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ವೃತ್ತಿ ಆರಂಭಸಿಸಿದ್ದು, ಬೈಂದೂರು, ಬ್ರಹ್ಮಾವರ, ಮಣಿಪಾಲದಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಉಡುಪಿ ಲೋಕಾಯುಕ್ತದಲ್ಲಿಯೂ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದರು. ಕಳೆದ ಮೂರುವರ್ಷದಿಂದ ಎ‌ಎನ್‌ಎಫ್‌ನಲ್ಲಿ ಸೇವೆ ಸಲ್ಲಿಸಿ, ಕುಂದಾಪುರ ಡಿ‌ವೈಎಸ್ಪಿಯಗಿ ಪದೋನ್ನತಿ ಹೊಂದಿದ್ದಾರೆ. ಕುಂದಾಪುರ ಡಿ‌ವೈಎಸ್ಪಿ ಪ್ರವೀಣ್ ಹೆಚ್.ನಾಯ್ಕ್ ಉಡುಪಿ ಸಿ‌ಎಸ್‌ಪಿಗೆ ವರ್ಗವಾಗಿದ್ದಾರೆ.

Comments are closed.