ಕರಾವಳಿ

ಕುಂದಾಪುರದಲ್ಲಿ ಬಿಜೆಪಿ ಯಾತ್ರೆ: ಟ್ರಾಫಿಕ್ ಕಿರಿಕಿರಿಯಿಂದ ಸಂಕಷ್ಟಕ್ಕೊಳಗಾದ ಗರ್ಭಿಣಿ!

Pinterest LinkedIn Tumblr

ಕುಂದಾಪುರ: ಕುಂದಾಪುರ ಮುಖ್ಯರಸ್ತೆಯಲ್ಲಿ ಪಾದಯಾತ್ರೆ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ತುರ್ತು ಚಿಕಿತ್ಸೆಗಾಗಿ ತೆರಳುತ್ತಿದ್ದ ರೋಗಿಗಳಿದ್ದ ಅಂಬುಲೆನ್ಸ್ ಕೂಡ ದಾರಿಯಿಲ್ಲದೇ ತೆರಳುವುದು ಕಷ್ಟವಾಗಿತ್ತು.

ಗರ್ಭಿಣಿ ಮಹಿಳೆಯೋರ್ವರು ಈ ವೇಳೆ ಸಾಕಷ್ಟು ಪರದಾಡಿದರು. ಈ ಘಟನೆ ಕಂಡ ಸಾರ್ವಜನಿಕರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಶಾಸ್ತ್ರಿ ವೃತ್ತದಲ್ಲಿ ಕೂಡಾ ಟ್ರಾಫಿಕ್ ಜಾಮ್ ಉಂಟಾಗಿದ್ದು ಖುದ್ದು ಕಾರ್ಕಳ ಎ.ಎಸ್ಪಿ, ಕುಂದಾಪುರ ಡಿವೈಎಸ್ಪಿ, ವಿವಿಧ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಗಳು ಮೊಕ್ಕಾಂ ಹೂಡಿದರೂ ಕೂಡ ಕೆಲ ಗಂಟೆ ಕಾಲ ಟ್ರಾಫಿಕ್ ಸಮಸ್ಯೆ ಎದುರಾಯಿತು.

Comments are closed.