ಕರಾವಳಿ

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್

Pinterest LinkedIn Tumblr

ಕುಂದಾಪುರ: ಕೇರಳದ ಖ್ಯಾತ ಚಲನಚಿತ್ರ ನಟ, ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದರು.

ಈ ಸಂದರ್ಭದಲ್ಲಿ ಎಸಿಯಾನೆಟ್ ಕಮ್ಯೂನಿಕೇಶನ್ಸ್ ಲಿ. ಇದರ ವೈಸ್ ಚಯರ್ಮೆನ್ ಕೆ. ಮಾಧವನ್ ಜೊತೆಗಿದ್ದರು. ಈ ಸಂರ್ಭದಲ್ಲಿ ಶ್ರಿ ದೇವಳದ ಕಾರ್ಯನಿರ್ವಹಣಾಧಿಕಾರಿ ಜೆ.ಸಿ ಜನಾರ್ಧನ್ ದೇವಳದ ಪರವಾಗಿ ಗೌರವಿಸಿದರು. ದೇವಳದ ಆಡಳಿತ ಮಂಡಳಿಯ ಸದಸ್ಯ ಪಿ.ವಿ ಅಭಿಲಾಷ್ ಹಾಗೂ ಅರ್ಚಕರಾದ ಡಾ| ಕೆ. ನರಸಿಂಹ ಅಡಿಗ ಉಪಸ್ಥಿರಿದ್ದರು.

ಚಿತ್ರವೊಂದರ ಶೂಟಿಂಗ್ ಸಲುವಾಗಿ ಕರಾವಳಿ ಭಾಗದಲ್ಲಿ ಮೋಹನ್ ಲಾಲ್ ತುಂಬಾನೇ ಬ್ಯುಸಿಯಾಗಿದ್ದು ಅಲ್ಲಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಕುಕ್ಕೆಗೂ ಭೇಟಿ ನೀಡಿದ್ದರು.

Comments are closed.