ಉಡುಪಿ: ಉಡುಪಿಯ ಕಟಪಾಡಿ ಸಮೀಪದ ಅಚ್ಚಡ ರಸ್ತೆಯ ವಿದ್ಯಾನಗರದಲ್ಲಿ ಉತ್ತರ ಕರ್ನಾಟಕ ಮೂಲದ ವಲಸೆ ಕಾರ್ಮಿಕನೊಬ್ಬನನ್ನ ಹಾರೆಯಿಂದ ಹೊಡೆದು ಕೊಲೆ ಮಾಡಲಾಗಿದೆ.
ನಿನ್ನೆ ತಡ ರಾತ್ರಿ ಘಟನೆ ನಡೆದಿದ್ದು,ಇಂದು ಬೆಳಗ್ಗೆ ಮರಳಿನ ರಾಶಿಯಲ್ಲಿ ಬಿದ್ದಿದ್ದ ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡದ್ದಾರೆ. ಮೃತ ದೇಹದ ಪಕ್ಕ ತಲೆಗೆ ಹೊಡೆದ ಹಾರೆ ಹಾಗೂ ಊಟಕ್ಕೆಂದು ಕೊಂಡೊಗುತ್ತಿದ್ದ ಮೊಸರಿನ ಪ್ಯಾಕೆಟ್ ಪತ್ತೆಯಾಗಿದೆ.
ಇವರೆಗೂ ವ್ಯಕ್ತಿಯ ಬಗ್ಗೆ ಪರಿಚಯ ಇಲ್ಲವಾಗಿದ್ದು,ಆ ಭಾಗದಲ್ಲಿ ವಾಸಿಸುತ್ತಿರುವ ಉತ್ತರ ಕರ್ನಾಟಕ ಮೂಲದವರನ್ನು ಕರೆಸಿ ಗುರುತು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.
ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕಟಪಾಡಿ ಉಪ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದ್ದಾರೆ.
Comments are closed.