ಕರಾವಳಿ

ಯಾರೇ ಇರಲಿ, ಸಂಘ ಪರಿವಾರದ ಬಗ್ಗೆ ಗೌರವನ್ನಿಟ್ಟು ಮಾತನಾಡಬೇಕು: ಕಾರ್ಕಳ ಶಾಸಕ ಸುನೀಲ್ ಕುಮಾರ್

Pinterest LinkedIn Tumblr

ಡುಪಿ: ಕಾರ್ಕಳದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಂಗಳೂರು ಕಾರ್ಪರೇಟರ್ ಪ್ರತಿಭಾ ಕುಳಾಯಿ ಸಂಘ ಪರಿವಾರದ ವಿರುದ್ದ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಕಾರ್ಕಳ ಶಾಸಕ ಸುನೀಲ್ ಕುಮಾರ್ ಖಂಡಿಸಿದ್ದಾರೆ.

ಸಂಘ ಪರಿವಾರ ಕಳೆದ 75 ವರ್ಷಗಳಿಂದ ದೇಶ ಕಾರ್ಯ ಕೆಲಸದಲ್ಲಿ ತೊಡಗಿದೆ ಅನ್ನೊದನ್ನ ಜಗತ್ತಿನ ಜನ ಗಮನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಲ್ಲೆ ಮತ್ತು ಹತ್ಯೆಗಳು ಆರಂಭವಾಗಿದ್ದು, ರಾಜ್ಯದಲ್ಲಿ ನಡೆಯುವ ಎಲ್ಲಾ ಹಲ್ಲೆ ಹಾಗೂ ಹತ್ಯೆಗಳು ಸರ್ಕಾರಿ ಪ್ರಾಯೋಜಿತವಾಗಿದೆ. ಇದನ್ನ ಮರೆಮಾಚುವ ದೃಷ್ಟಿಯಿಂದ ಜನರ ದಾರಿ ತಪ್ಪಿಸಿ, ಸಂಘ ಪರಿವಾರದ ಮೇಲೆ ಆರೋಪ ಮಾಡುವಂತಹ ಕೆಲಸ ಕಾರ್ಯಗಳನ್ನು ಸರ್ಕಾರ ಮಾಡ್ತಾ ಇದೆ. ದೊಡ್ಡ ಪ್ರಮಾಣದಲ್ಲಿ ಸಮಾಜವನ್ನು ಒಡೆಯುವಂತಹ ಕೆಲಸ ನಡೀತಾ ಇದೆ. ಹಿಂದೂಗಳನ್ನ ಅವಹೇಳನ ಮಾಡುವಂತಹ ಕೃತ್ಯ ಸರ್ಕಾರ ಮಾಡ್ತಾ ಇದೆ ಎಂದರು.

ಕಾರ್ಪೋರೇಟರ್ ಹೇಳಿಕೆಯನ್ನ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ. ಬಾಯಿಗೆ ಬಂದಂಗೆ ಮಾತನಾಡಿದರೆ ಪ್ರಚಾರ ಸಿಗುತ್ತೆ ಅನ್ನೋದಕ್ಕೆ ಮಾತನಾಡಿದ್ದಾರೆ. ಟೆನ್ ಪರ್ಸಂಟ್ ಸರ್ಕಾರದವರಿಂದ ಹಣಕಾಸಿನ ಬಗ್ಗೆ ನಮ್ಮನ್ನ ಉಲ್ಲೇಖ ಮಾಡಿ ಮತನಾಡುವಂತಹ ಅವಶ್ಯಕತೆಯಿಲ್ಲ. ಸಂಘ ಪರಿವಾರದ ಬಗ್ಗೆ ಗೌರವನ್ನಿಟ್ಟು ಮಾತನಾಡಬೇಕು. ನಾಲಿಗೆ ಬಿಗಿ ಹಿಡಿದು ಮತನಾಡಬೇಕು ಎಂದು ಕಾರ್ಪರೇಟರ್ ಪ್ರತಿಭಾ ಕುಳಾಯಿಗೆ ಸುನೀಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

Comments are closed.