ಉಡುಪಿ: ಪೇಜಾವರ ಶ್ರೀಗಳಿಗೆ ಹಠಾತ್ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಉಡುಪಿಯ ಹೈಟೆಕ್ ಅಸ್ಪತ್ರೆಗೆ ದಾಖಲಿಸಲಾಗಿದೆ.
ಪರ್ಯಾಯ ಮುಗಿಸಿ ನಂತರ ಸಂಚಾರದಲ್ಲಿದ್ದ ಸ್ವಾಮೀಜಿಯವರು ಸೋಂದ, ಗದಗ, ಮಂತ್ರಲಾಯಕ್ಕೆ ತೆರಳಿದ್ದರು. ಮಂತ್ರಾಲಯದಿಂದ ಹೈದರಾಬಾದ್ ಮಾರ್ಗದಲ್ಲಿ ಕಾರಿಗೆ ಬ್ರೇಕ್ ಹಾಕುವ ಸಂದರ್ಭದಲ್ಲಿ ಸ್ವಾಮೀಜಿಯವರ ಬೆನ್ನಿಗೆ ಉಳುಕು ಕಾಣಿಸಿಕೊಂಡಿದೆ. ಕೂಡಲೇ ಸ್ವಾಮೀಜಿಯವರನ್ನು ವೀಲ್ ಚೇರ್ ಮೂಲಕ ಮಠದ ಶಿಷ್ಯ ವೃಂದ ಉಡುಪಿ ಆಸ್ಪತ್ರೆಗೆ ಕರೆತಂದಿದ್ದಾರೆ. ವಿಮಾನ ಮೂಲಕ ಶಿಷ್ಯರ ಜೊತೆ ಸ್ವಾಮೀಜಿ ವಾಪಾಸ್ಸಾಗಿದಾರೆನ್ನಲಾಗಿದೆ.
ವೈದ್ಯರಾದ ಡಾ ಉಮೆಶ್ ಪ್ರಭು ಅವರಿಂದ ಆರೋಗ್ಯ ತಪಾಸಣೆ ನಡೆಸಿದ್ದು, ವೈದ್ಯರು ಬೆನ್ನು ಮೂಳೆ ಸಿಟಿ ಸ್ಕ್ಯಾನ್ ನಡೆಸಿದ್ದಾರೆ.
Comments are closed.