ಕರಾವಳಿ

ಹಿರಿಯಡಕ ಮಹತೋಭಾರ ಶ್ರೀ ವೀರಭಧ್ರಸ್ವಾಮಿ ದೇವಸ್ಥಾನದಲ್ಲಿ: ಸಾನ್ನಿಧ್ಯ ಸಂಕೋಚ-ಬಾಲಾಲಯ ಪ್ರತಿಷ್ಠೆ ಸಂಪನ್ನ

Pinterest LinkedIn Tumblr

ಇತಿಹಾಸ ಪ್ರಸಿದ್ಧ ಮಹತೋಭಾರ ಹಿರಿಯಡ್ಕ ಶ್ರೀ ವೀರಭದ್ರಸ್ವಾಮಿ ದೇವಳದ ಅಮೂಲಾಗ್ರ ಜೀಣೋದ್ಧಾರದ ಪ್ರಯುಕ್ತ ಅನುಜ್ಞಾ ಕಲಶ ಪ್ರಕ್ರಿಯೆ, ಸಾನಿಧ್ಯ ಸಂಕೋಚ ಹಾಗೂ ಬಾಲಾಲಯ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮಗಳು ಎರಡು ದಿನಗಳ ಪರ್ಯಾಂತ ಸಾಂಗವಾಗಿ ಜರುಗಿದವು.

ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಮುಖ್ಯಸ್ಥರುಗಳಾದ ಶ್ರೀ ವೇದಮೂರ್ತಿ ಷಡಂಗ ಲಕ್ಷ್ಮೀನಾರಾಯಣ ತಂತ್ರಿ ಮತ್ತು ಷಡಂಗ ಗುರುರಾಜ್ ತಂತ್ರಿ ಇವರುಗಳ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನದ ಮುಖ್ಯಸ್ಥರಾದ ಓಂತಿಬೆಟ್ಟು ಬೀಡು ಜಯಪ್ರಕಾಶ ಹೆಗ್ಡೆ, ಅಂಜಾರು ಬೀಡು ಸುಭಾಶ್ಚಂದ್ರ ಹೆಗ್ಡೆ, ಪಡ್ದಾಮ್ ಬೀಡು ಹರ್ಷವರ್ಧನ ಹೆಗ್ಡೆ, ಮಾಂಬೆಟ್ಟು ಗೋವರ್ಧನದಾಸ್ ಹೆಗ್ಡೆ, ಅಮರನಾಥ ಶೆಟ್ಟಿ, ಸೋಮನಾಥ ಶೆಟ್ಟಿ ಆಡಳಿತಾಧಿಕಾರಿ ಎಚ್ ಕೃಷ್ಣಮೂರ್ತಿ ಇವರುಗಳು ಉಪಸ್ಥಿತರಿದ್ದು ಊರ-ಪರಊರ ಸಾವಿರಾರು ಭಕ್ತಾಭಿಮಾನಿಗಳು ಈ ಅಭೂತಪೂರ್ವ ಸಂಧರ್ಭದಲ್ಲಿ ಪಾಲ್ಗೊಂಡರು.

Comments are closed.