ಕರಾವಳಿ

ಬಳ್ಳಾಲ್ ಬಾಗ್ ಗುರ್ಜಿ ದೀಪೋತ್ಸವ : ಸಾಧಕರಿಗೆ ಸನ್ಮಾನ

Pinterest LinkedIn Tumblr

ಮಂಗಳೂರು : ಬಳ್ಳಾಲ್ ಬಾಗ್ ಗುರ್ಜಿ ದೀಪೋತ್ಸವ ಸಮಿತಿ ವತಿಯಿಂದ 66ನೇ ವರ್ಷದ ಗುರ್ಜಿ ದೀಪೋತ್ಸವ ಕಾರ್ಯಕ್ರಮ ನಡೆಯಿತು.

ಶ್ರೀ ರಘುವೀರ್ ಭಂಡಾರಿ (ವಕೀಲರು), ಶ್ರೀ ಪ್ರದ್ಯುಮ್ನ ರಾವ್ ಶಿವರೂರ್, ಶ್ರೀ ಲೋಕನಾಥ್ ಶೆಟ್ಟಿ ದೀಪಾರಧನೆಗೈದರು. ಡಾ.ಮೋಹನ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಬದ್ರಿನಾಥ್ ಕಾಮಾತ್, ಸಂದೇಶ್ ಶೆಟ್ಟಿ ಅತಿಥಿಗಳಾಗಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಳ್ಳಾಲ್ ಬಾಗ್ ಗುರ್ಜಿ ದೀಪೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೆ ಸುರೇಶ್ ಬಲ್ಲಾಳ್, ಎಂ ಸುಂದರ್ ಶೆಟ್ಟಿ, ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಿ.ಸಾಲಿಯಾನ್, ಪದಾಧಿಕಾರಿಗಳಾದ ರಮಾನಂದ್ ಭಂಡಾರಿ, ಜಯಂತ್ ಶೆಟ್ಟಿಗಾರ್, ಜಗನ್ನಾಥ್ ಶೆಟ್ಟಿ,ದಿನೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Comments are closed.