ಮನೋರಂಜನೆ

ಬಿಗ್‌ಬಾಸ್‌ ಮನೆಯಿಂದ ತೇಜಸ್ವಿನಿ ಔಟ್ !

Pinterest LinkedIn Tumblr

ಬೆಂಗಳೂರು: ನಾಲ್ಕನೇ ವಾರಕ್ಕೆ ಬಿಗ್‌ಬಾಸ್‌ ಮನೆಯಿಂದ ತೇಜಸ್ವಿನಿ ಹೊರಬಿದ್ದಿದ್ದಾರೆ. ‘ವಾರದ ಕಥೆ ಕಿಚ್ಚ ಜೊತೆ’ಯಲ್ಲಿ ಈ ವಾರ ಮನೆಯಿಂದ ಹೊರಹೋಗುವ ಸದಸ್ಯರ ಹೆಸರನ್ನು ಸುದೀಪ್ ಪ್ರಕಟಿಸಿದರು.

ತಂದೆಯ ಆರೋಗ್ಯದಲ್ಲಿ ದಿಢೀರ ವ್ಯತ್ಯಾಸವಾಗಿದ್ದರಿಂದ ಬಿಗ್‌ಬಾಸ್‌ ಮನೆಯಿಂದ ಹೊರ ನಡೆದಿದ್ದ ತೇಜಸ್ವಿನಿ ಗುರುವಾರ ರಾತ್ರಿ ವಾಪಸ್ಸಾಗಿದ್ದರು, ತಂದೆಯ ಸೂಚನೆಯ ಮೇರೆಗೆ ಬಿಗ್‌ ಮನೆಗೆ ಮರಳಿದ್ದ ತೇಜಸ್ವಿನಿ, ಈ ವಾರ ಎಲಿಮಿನೇಷನ್‌ನಿಂದ ಪಾರಾಗುತ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಇತ್ತು, ಆದರೆ ಎಲ್ಲರ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.

ತಂದೆಗೆ ಕಿಡ್ನಿ ವೈಫಲ್ಯವಾಗಿ, ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ತೇಜಸ್ವಿನಿ ಅನಿವಾರ್ಯವಾಗಿ ಬಿಗ್‌ ಮನೆಗೆ ವಿದಾಯ ಹೇಳಿದ್ದರು. ಅಷ್ಟೇ ಅಲ್ಲದೆ ತೇಜಸ್ವಿನಿ ಅವರ ಇರುವಿಕೆಯನ್ನು ತಂದೆ-ತಾಯಿ ಬಯಸಿದ್ದರಿಂದ ಹೋಗಲೇಬೇಕಾದ ಪರಿಸ್ಥಿತಿ ಎದುರಾಗಿತ್ತು. ಹೋಗುವಾಗ ಬಿಗ್‌ ಮನೆಗೆ ಮರಳುವ ಆಶಯವನ್ನು ತೇಜು ವ್ಯಕ್ತಪಡಿಸಿದ್ದರು. ಅದರಂತೆ ಶುಕ್ರವಾರದ ಎಪಿಸೋಡ್‌ನಲ್ಲಿ ಮತ್ತೆ ಮನೆಗೆ ಎಂಟ್ರಿ ನೀಡಿದ ತೇಜು ಅವರನ್ನು ಉಳಿದ ಸದಸ್ಯರೆಲ್ಲ ಖುಷಿಯಿಂದ ಬರಮಾಡಿಕೊಂಡಿದ್ದರು.

ನಾಲ್ಕನೇ ವಾರ ನಾಮಿನೇಟ್‌ ಆಗಿರುವ ಸ್ಪರ್ಧಿಗಳಲ್ಲಿ ಸಮೀರ್‌, ಜಯ ಶ್ರೀನಿವಾಸನ್‌,ನಿವೇದಿತಾ, ಜಗನ್‌, ಸಿಹಿ ಕಹಿ ಚಂದ್ರು, ಕಾರ್ತಿಕ್‌ ಮತ್ತು ಅನುಪಮಾ ಸೇಫ್ ಆಗಿದ್ದಾರೆ.

Comments are closed.