ಕರಾವಳಿ

ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ಗೋಪೂಜೆ : ಗೋ ಸಂರಕ್ಷಣಾ ನಿಧಿ ಸಂಗ್ರಹ ಪಾದಯಾತ್ರೆಗೆ ಚಾಲನೆ

Pinterest LinkedIn Tumblr

ಮಂಗಳೂರು, ಆಕ್ಟೋಬರ್.20: ಭಾರತೀಯ ಜನತಾ ಪಾರ್ಟಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ಶುಕ್ರವಾರ ದ.ಕ.ಜಿಲ್ಲಾ ಕಾರ್ಯಾಲಯ ಮುಂಭಾಗದಲ್ಲಿ ಗೋಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

ಇದೇ ವೇಳೆ ಗೋ ಸಂರಕ್ಷಣಾ ನಿಧಿ ಸಂಗ್ರಹ ಪಾದಯಾತ್ರೆಗೆ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರುರವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಗೋಸಂರಕ್ಷಣಾ ಪ್ರಕೋಷ್ಠದ ರಾಜ್ಯ ಸಹಸಂಚಾಲಕರಾದ ವಿನಂಯ ಎಲ್ ಶೆಟ್ಟಿ, ಜಿಲ್ಲಾ ಸಹಸಂಚಾಲಕರಾದ ರಾಜೇಶ್ ಶೆಟ್ಟಿ,ಪುಷ್ಪರಾಜ್ ಆಳ್ವ, ಮಂಗಳೂರು ನಗರ ದಕ್ಷಿಣ ಸಂಚಾಲಕರಾದ ಸುಧೀರ್ ಶೆಟ್ಟಿಗಾರ್,ಸಹ ಸಂಚಾಲಕರಾದ ರಾಜೇಶ ದೇವಾಡಿಗ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ರೈ,ಉಮಾನಾಥ್ ಕೋಟ್ಯಾನ್,ಕ್ಯಾ.ಬ್ರಿಜೇಶ್ ಚೌಟ,ಸುದರ್ಶನ್ ಎಂ,ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ವೇದವ್ಯಾಸ ಕಾಮತ್, ಪ್ರಭಾಮಾಲಿನಿ,ಪೂಜಾ ಪೈ,ಜಯಂತಿ ಆಚಾರ್,ಪೂರ್ಣಿಮಾ ರಾವ್, ರೂಪಡಿ ಬಂಗೇರ,ಮೀರಾ ಕರ್ಕೇರ, ಪೂರ್ಣಿಮಾ,ಸಂಜಯ ಪ್ರಭು, ಗುರುಚರಣ್, ರವಿಶಂಕರ ಮಿಜಾರ್, ಕೆ ಮೋನಪ್ಪ ಭಂಡಾರಿ, ರುಕ್ಮಯ್ಯ ಪೂಜಾರಿ,ಕೃಷ್ಣಪ್ಪ ಪೂಜಾರಿ,ರಮೇಶ್ ಕಂಡೆಟ್ಟು,ಭಾಸ್ಕರ ಚಂದ್ರ ಶೆಟ್ಟಿ,ಜಿತೇಂದ್ರ ಕೊಟ್ಟಾರಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

Comments are closed.