ಉಡುಪಿ: ಕುಡುಕ ತಂದೆಯೋರ್ವ ತನ್ನ ಮಗನಿಗೆ ಚೂರಿ ಇರಿದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದ್ದು ಮಗ ಅಪಾಯದಿಂದ ಪಾರಾಗಿದ್ದಾರೆ. ಗೋವರ್ಧನ್ ಪುತ್ರನ್ ಗಾಯಗೊಂಡವರು. ಅವರ ತಂದೆ ಸೋಮಪ್ಪ ಮೈಂದನ್ ಆರೋಪಿಯಾಗಿದ್ದಾರೆ.
ಗೋವರ್ಧನ್ ಅವರು ಊಟ ಮಾಡಿ ಮನೆಯಲ್ಲಿ ಟಿ.ವಿ ನೋಡುತ್ತಿರುವಾಗ್ ಸೋಮಪ್ಪ ಮೈಂದನ್ (68) ರವರು ಮದ್ಯಪಾನ ಮಾಡಿ ಮನೆಗೆ ಬಂದು ಅವರಷ್ಟಕ್ಕೆ ಬೊಬ್ಬೆ ಹಾಕುತ್ತಾ, ಮನೆಯ ತುಳಸಿಕಟ್ಟೆಯ ಎದುರು ನೆಲ ಮುಟ್ಟಿ ಶಾಪ ಹಾಕುತ್ತಿದ್ದು ಈ ಬಗ್ಗೆ ಗೋವರ್ಧನ್ ವಿಚಾರಿಸಲು ತೆರಳಿದಾಗ ಸೋಮಪ್ಪ ಮೈಂದನ್ ತನ್ನ ಕೈಯಲ್ಲಿದ್ದ ಸಣ್ಣ ಚೂರಿಯಿಂದ ಗೋವರ್ಧನರ ಬಲ ಎದೆಗೆ ಗೀರಿದ್ದು ರಕ್ತಗಾಯವಾಗಿರುತ್ತದೆ. ಕೂಡಲೆ ಗೋವರ್ಧನ್ ಸ್ನೇಹಿತನಾದ ಪ್ರಸಾದ ಎನ್ನುವವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಗೋವರ್ಧನ್ ಪುತ್ರನ್ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.