ಉಡುಪಿ: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಉಡುಪಿ ಶ್ರೀ ಕೃಷ್ಣ ಮಠದ ಕುದುರೆ ಕೊನೆಯುಸಿರೆಳೆದ ಘಟನೆ ಭಾನುವಾರ ನಡೆದಿದೆ.
ಕುದುರೆಯನ್ನು ಕೃಷ್ಣ ಎನ್ನುವವರು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಕುದುರೆ ಅಕಸ್ಮಾತ್ ಆಗಿ ಡಿವೈಡರಿಗೆ ಡಿಕ್ಕಿ ಹೊಡೆದು ಗಾಯಗೊಂಡಿತ್ತು. ಕೂಡಲೇ ಅದನ್ನು ಮಠದ ಅಶ್ವಾಲಯಕ್ಕೆ ಕರೆತಂದು ಚಿಕಿತ್ಸೆ ನೀಡಲಾಯಿತಾದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಅಶ್ವ ಸಾವನ್ನಪ್ಪಿದೆ.
Comments are closed.