ಉಡುಪಿ: ಕಂಬಳ ಕ್ರೀಡೆಯನ್ನು ಉಳಿಸಬೇಕು ಹಾಗೂ ಕಾನೂನು ಬದ್ದ ಕ್ರೀಡೆಯನ್ನಾಗಿ ಮಾಡಬೇಕು ಎಂಬ ಹಕ್ಕೋತ್ತಾಯದೊಂದಿಗೆ ಉಡುಪಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಉಡುಪಿಯ ಕ್ಲಾಕ್ ಟವರ್ ನ ಗಾಂಧಿ ಪ್ರತಿಮೆಯ ಎದುರು ಕೋಣಗಳನ್ನು ತರಿಸಿ ವಿನೂತನ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜನಪ್ರತಿನಿಧಿಗಳು ಕಂಬಳ ಕ್ರೀಡೆಯನ್ನು ಉಳಿಸುವಲ್ಲಿ ತಮ್ಮ ಇಚ್ಚಾಶಕ್ತಿಯನ್ನು ತೋರಿಸಬೇಕೆಂದು ಆಗ್ರಹಿಸಿದರು. ಜಲ್ಲಿಕಟ್ಟು ಕ್ರೀಡೆಯ ವಿಚಾರವಾಗಿ ಕೈಗೊಂಡ ತಮಿಳು ನಾಡು ಸರ್ಕಾರದ ಕ್ರಮದಂತೆ ರಾಜ್ಯ ಸರ್ಕಾರವೂ ಅತ್ಯಾಧೇಶದಮೂಲಕ ಕಂಬಳ ಉಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಕಂಬಳಕ್ಕೂ ಜಲ್ಲಿಕಟ್ಟಿಗೂ ಅಜಗಜಾಂತರ ವ್ಯತ್ಯಾಸವಿದೆ. ಇದರ ನಡುವಿನ ಹೋಲಿಕೆ ಸರಿಯಲ್ಲ. ಇದೊಂದು ಸಾಂಕೇತಿಕ ಹೋರಾಟವಷ್ಟೇ ಮುಂದಿನ ದಿನಗಳಲ್ಲಿ ಕಂಬಳ ಕ್ರೀಡೆಯ ಉಳಿವಿಗೆ ಉಗ್ರ ಹೋರಾಟಕ್ಕೂ ಸಿದ್ದ ಎಂದು ಹೋರಾಟಗಾರರು ಎಚ್ಚರಿಸಿದರು.
Comments are closed.