ಮಂಗಳೂರು: ನಗರದ ಹೊರಭಾಗದಲ್ಲಿರುವ ಪಡೀಲ್ ರೈಲ್ವೇ ಮೇಲ್ಸೇತುವೆ ಬಳಿ ಟಿಪ್ಪರ್ ಹಾಗೂ ಜೀಪು ಡಿಕ್ಕಿಯಾದ ಪರಿಣಾಮ ಜೀಪು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ಉಡುಪಿಯ ಮಹಮ್ಮದ್ ಶಕೀಲ್ (35) ಮೃತಪಟ್ಟವರು ಅವರು ಬೆಡ್ ದುರಸ್ತಿಯ ಕೆಲಸ ಮಾಡುತ್ತಿದ್ದು ಕೆಲಸದ ನಿಮಿತ್ತ ಬಿ.ಸಿ ರೋಡ್ ನಿಂದ ಮಂಗಳೂರಿನತ್ತ ಜೀಪ್ನಲ್ಲಿ ಬರುತ್ತಿದ್ದರು.
ಈ ವೇಳೆ ಮಂಗಳೂರಿನಿಂದ ಅಡ್ಯಾರ್ -ಕಣ್ಣೂರು ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿಯೊಂದಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಹಮ್ಮದ್ ಶರೀಫ್ ಸ್ಥಳದಲ್ಲೇ ಮೃತಪಟಿದ್ದು, ಜೀಪ್ ಪೂರ್ಣ ನಜ್ಜುಗುಜ್ಜಾಗಿದೆ.
ಟಿಪ್ಪರ್ ಚಾಲಕ ಘಟನೆಯ ಬಳಿಕ ಪರಾರಿಯಾಗಿದ್ದಾರೆ. ಮೃತರು ಪತ್ನಿ ,ಪುತ್ರ ಹಾಗೂ ಪುತ್ರಿಯನ್ನು ಆಗಲಿದ್ದಾರೆ. ಅಪಘಾತದ ಬಳಿಕ ಹೆದ್ದಾರಿಯಲ್ಲಿ ಕೆಲವು ಹೊತ್ತು ಸಂಚಾರ ವ್ಯತ್ಯಯಗೊಂಡಿತ್ತು.
Comments are closed.