ಕುಂದಾಪುರ: ಪ್ರಧಾನಿ ಮೋದಿಯವರಿಗೆ ಏನಾದ್ರೂ ಕಂಟಕವಿದಿಯಾ, ಗೊತ್ತಿಲ್ಲ, ಉಡುಪಿ ಜಿಲ್ಲೆ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಲ್ಲಿ ಬೈಂದೂರು ಬಿಜೆಪಿ ಘಟಕದ ವತಿಯಿಂದ ನವ ಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಯಡ್ಯೂರಪ್ಪ ಮುಂದಿನ ಸಿಎಂ ಆಗಲಿ ಎಂದು ಕಾರ್ಯಕರ್ತರು ವಿಶೇಷ ಪೂಜೆ ಹಾಗೂ ಪಾದಯಾತ್ರೆ ನಡೆಸಿದರು.
ಕಾಳಧನಿಕರ ಕೆಂಗಣ್ಣಿಗೆ ಗುರಿಯಾಗಿರುವ ಪ್ರಧಾನಿ ಮೋದಿಗೆ ಮುಂಬರುವ ವರ್ಷದಲ್ಲಿ ಕಂಟಕವಿದೆ ಎಂದು ಧಾರ್ಮಿಕ ಜಿಜ್ಞಾಸುಗಳು ಹೇಳುತ್ತಿದ್ದಾರೆ. ಹಾಗಾಗಿ ಕೊಲ್ಲೂರು ಕ್ಷೇತ್ರದಲ್ಲಿ ನವ ಚಂಡಿಕಾಯಾಗ ನಡೆಸಿದ್ದಾರೆ. ಮುಕಾಂಬಿಕೆಯ ಸನ್ನಿಧಿಯಲ್ಲಿ ನಡೆಯುವ ಚಂಡಿಕಾಯಾಗಕ್ಕೆ ವಿಶೇಷ ಮಹತ್ವ ಇದೆ. ಜಡ್ಕಲ್ ನಿಂದ ಪಾದಯಾತ್ರೆಯ ಮೂಲಕ ಕೊಲ್ಲೂರಿಗೆ ಬಂದ ಕಾರ್ಯಕರ್ತರು, ಪೂರ್ಣಾಹುತಿಯಲ್ಲಿ ಭಾಗಿಯಾದರು. ಸ್ಥಳೀಯ ಮುಖಂಡ ಹಾಗೂ ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಸುಕುಮಾರ ಶೆಟ್ಟಿ ಯಾಗದ ನೇತೃತ್ವ ವಹಿಸಿದ್ದರು.
ಇದೇ ವೇಳೆ ಯಡ್ಯೂರಪ್ಪನವರೇ ಮುಂದಿನ ಸಿಎಂ ಆಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯ್ತು. ಕಂಟಕ ದೂರ ಮಾಡುವುದು ಮಾತ್ರವಲ್ಲದೆ ಬಲ ತುಂಬುವ ದೃಷ್ಟಿಯಿಂದ ಅನೇಕ ರಾಜಕೀಯ ನಾಯಕರು, ಸಿನಿಮಾ ನಟರು ಈ ಕ್ಷೇತ್ರದಲ್ಲಿ ಚಂಡಿಕಾ ಯಾಗ ನಡೆಸುತ್ತಾರೆ. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯವರು ಮುಕಾಂಬಿಕಾ ಕ್ಷೇತ್ರಕ್ಕೆ ಬರುವಂತಾಗಲಿ ಎಂದು ಆಶಿಸಿದರು.
ಮುಂದಿನ ದಿನದಲ್ಲಿ ಶತ ಚಂಡಿಕಾಯಾಗ ಯಾಗ ಹಮ್ಮಿಕೊಳ್ಳೋದಾಗಿಯೂ ಸ್ಥಳೀಯ ನಾಯಕರು ಹೇಳಿದ್ದಾರೆ.
Comments are closed.