ಉಡುಪಿ: ನಿಲ್ಲಿಸಿದ್ದ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಾರು ಬೆಂಕಿಯಿಂಫದ ಧಗಧಗ ಹೊತ್ತಿ ಉರಿದ ಘಟನೆ ಉಡುಪಿ ಕಟಪಾಡಿಯ ವೆಂಕಟರಮಣ ದೇವಸ್ಥಾನದ ಬಳಿ ನಡೆದಿದೆ.
ಬೆಂಗಳೂರು ಮೂಲದ ಕಾರು ಇದಾಗಿದ್ದು ಮದುವೆ ಸಮಾರಂಭಕ್ಕಾಗಿ ಉಡುಪಿಗೆ ಆಗಮಿಸಿದ್ದರು. ಕಾರನ್ನು ನಿಲ್ಲಿಸಿದ್ದ ವೇಳೆ ಕಾರಿನಲ್ಲಿದ್ದ ಎಸಿ ಶಾರ್ಟ್ ಸರ್ಕ್ಯುಟ್ ನಿಂದ ಈ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದ್ದು ಬೆಂಕಿಯ ಪರಿಣಾಮ ಕಾರಿಗೆ ಭಾಗಶ: ಹಾನಿಯಾಗಿದೆ. ಸ್ಥಳೀಯರು ನೀರು ಹಾಯಿಸಿ ಕಾರಿನಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
Comments are closed.