ಕುಂದಾಪುರ: ಪಂಡರಾಪುರದಿಂದ ಲೋಕಸಂಚಾರವಾಗಿ ಹೊರಟ ಮುಕ್ಕಣ್ಣು ಹಾಗೂ ಮೂರು ಕೊಂಬುಗಳಿರುವ ಬ್ರಹತ್ ಗೂಳಿಯನ್ನು ಹೊಂದಿರುವ ತಂಡ ಕುಂದಾಪುರಕ್ಕೆ ಆಗಮಿಸಿದ್ದು ಈ ಭಾಗದಲ್ಲಿ ಭಕ್ತರ ಗಮನ ಸೆಳೆದಿದೆ.
ಮುಖದ ಭಾಗದಲ್ಲಿ ಹೆಚ್ಚುವರಿ ಒಂದು ಕಣ್ಣು ಹಾಗೂ ಹಣೆ ಭಾಗದಲ್ಲಿ ದೊಡ್ಡ ಗಾತ್ರದ ಕೊಂಬು ಹೊಂದಿರುವ ಈ ಬ್ರಹತ್ ಗೂಳಿ ಭಗವಂತನ ಅಪರಾವತಾರವೆಂಬ ನಂಬಿಕೆ ಆ ತಂಡದ್ದು. ಈ ವಿಭಿನ್ನ ಗೂಳಿಯನ್ನು ನೋಡಲು ಅದು ಹೋದ ಭಾಗದಲ್ಲೆಲ್ಲಾ ಜನಸಂದಣಿ ಇರಲಿದೆ. ನಾಲ್ಕೈದು ಮಂದಿ ತಂಡ ಈ ಗೂಳಿಯನ್ನು ವಾಹನದಲ್ಲಿ ಕರೆತರುತ್ತಾ ಭಕ್ತರು ನೀಡುವ ಕಾಣಿಕೆಯನ್ನು ಪಡೆಯುತ್ತಾರೆ.
Comments are closed.