ಗೋವಾ/ಕುಂದಾಪುರ: ಇನ್ಸುಲೆಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರ ಮೂಲದ ಇಬ್ಬರು ಯುವಕರು ಸೇರಿದಂತೆ ಬೈಕ್ ಸವಾರ ಅಪರಿಚಿತ ವ್ಯಕ್ತಿ ಧಾರಣವಾಗಿ ಮೃತಪಟ್ಟ ಘಟನೆ ಗೋವಾದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಮೀನು ತುಂಬಿಕೊಂಡು ಹೋಗುತ್ತಿದ್ದ ಇನ್ಸುಲೆಟರ್ ನಲ್ಲಿದ್ದ ಮರವಂತೆ ನಿವಾಸಿ ರಿಯಾಝ್(33) ಹಾಗೂ ತಲ್ಲೂರ ಕೋಟೆಬಾಗಿಲು ನಿವಾಸಿ ಗಣೇಶ್(24) ಮೃತರಾದ ದುರ್ದೈವಿಗಳು. ಈ ದುರ್ಘಟನೆಯಲ್ಲಿ ಅಪರಿಚಿತ ಬೈಕ್ ಸವಾರ ಕೂಡ ಮೃತಪಟ್ಟಿದ್ದಾನೆ.
ಮರವಂತೆಯ ಮನ್ಸೂರ್ ಎನ್ನುವವರಿಗೆ ಸೇರಿದ ಇನ್ಸುಲೆಟರ್ ಕುಂದಾಪುರದಿಂದ ಮೀನು ತುಂಬಿಸಿಕೊಂಡು ಗೋವಾಕ್ಕೆ ತೆರಳುತ್ತಿದ್ದ ಸಂದರ್ಭ ಲಾರಿ ಕುಂಡ್ಲಿ ಸಮೀಪಿಸುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. ಈ ಸ್ಸ್ಂದರ್ಭ ಇನ್ಸುಲೆಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಗಂಭೀರವಾಗಿ ಗಾಯಗೊಂಡ ರಿಯಾಝ್ ಹಾಗೂ ಗಣೇಶ್ ಸಾವನ್ನಪ್ಪಿದ್ದಲ್ಲದೇ ಬೈಕ್ ಸವಾರನೂ ಮೃತಪಟ್ಟಿದ್ದಾನೆ.
ಗೋವಾದ ಕುಂಡ್ಲಿ ಪೊಲೀಸರು ಸ್ಥಳಕ್ಕೆ ಭೇಟಿನೀಡಿದ್ದಾರೆ.
Comments are closed.