ಕರಾವಳಿ

ಗೋವಾದಲ್ಲಿ ಭೀಕರ ರಸ್ತೆ ಅಪಘಾತ; ಕುಂದಾಪುರದ ಇಬ್ಬರು ಸೇರಿದಂತೆ ಮೂವರ ದುರ್ಮರಣ

Pinterest LinkedIn Tumblr

ಗೋವಾ/ಕುಂದಾಪುರ: ಇನ್ಸುಲೆಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರ ಮೂಲದ ಇಬ್ಬರು ಯುವಕರು ಸೇರಿದಂತೆ ಬೈಕ್ ಸವಾರ ಅಪರಿಚಿತ ವ್ಯಕ್ತಿ ಧಾರಣವಾಗಿ ಮೃತಪಟ್ಟ ಘಟನೆ ಗೋವಾದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

goa-accident-9 goa-accident-6 goa-accident-7 goa-accident-8 goa-accident-10 goa-accident-5 goa-accident-4 goa-accident-2 goa-accident-1 goa-accident-3

ಮೀನು ತುಂಬಿಕೊಂಡು ಹೋಗುತ್ತಿದ್ದ ಇನ್ಸುಲೆಟರ್ ನಲ್ಲಿದ್ದ ಮರವಂತೆ ನಿವಾಸಿ ರಿಯಾಝ್(33) ಹಾಗೂ ತಲ್ಲೂರ ಕೋಟೆಬಾಗಿಲು ನಿವಾಸಿ ಗಣೇಶ್(24) ಮೃತರಾದ ದುರ್ದೈವಿಗಳು. ಈ ದುರ್ಘಟನೆಯಲ್ಲಿ ಅಪರಿಚಿತ ಬೈಕ್ ಸವಾರ ಕೂಡ ಮೃತಪಟ್ಟಿದ್ದಾನೆ.

ಮರವಂತೆಯ ಮನ್ಸೂರ್ ಎನ್ನುವವರಿಗೆ ಸೇರಿದ ಇನ್ಸುಲೆಟರ್ ಕುಂದಾಪುರದಿಂದ ಮೀನು ತುಂಬಿಸಿಕೊಂಡು ಗೋವಾಕ್ಕೆ ತೆರಳುತ್ತಿದ್ದ ಸಂದರ್ಭ ಲಾರಿ ಕುಂಡ್ಲಿ ಸಮೀಪಿಸುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. ಈ ಸ್ಸ್ಂದರ್ಭ ಇನ್ಸುಲೆಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಗಂಭೀರವಾಗಿ ಗಾಯಗೊಂಡ ರಿಯಾಝ್ ಹಾಗೂ ಗಣೇಶ್ ಸಾವನ್ನಪ್ಪಿದ್ದಲ್ಲದೇ ಬೈಕ್ ಸವಾರನೂ ಮೃತಪಟ್ಟಿದ್ದಾನೆ.

ಗೋವಾದ ಕುಂಡ್ಲಿ ಪೊಲೀಸರು ಸ್ಥಳಕ್ಕೆ ಭೇಟಿನೀಡಿದ್ದಾರೆ.

Comments are closed.