ಕುಂದಾಪುರ: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಕುಂದಾಪುರದ ಸೇನಾಪುರ ರೈಲ್ವೇ ಗೇಟ್ ಸಮೀಪ ಗುರುವಾರ ನಡೆದಿದೆ. 60 ವರ್ಷ ಪ್ರಾಯದ ಮಂಜುನಾಥ ದೇವಾಡಿಗ ಮೃತ ದುರ್ದೈವಿಯಾಗಿದ್ದಾರೆ.
ರೈಲು ಡಿಕ್ಕಿಯಾದ ಪರಿಣಾಮ ಸಂಪೂರ್ಣ ದೇಹ ಛಿದ್ರವಾಗಿದ್ದು ಗಂಗೊಳ್ಳಿ 24*7 ಹೆಲ್ಪ್ ಲೈನ್ ಕಾರ್ಯಕರ್ತರಾದ ಇಬ್ರಾಹಿಂ ಗಂಗೊಳ್ಳಿ ಹಾಗೂ ಅಫ್ವಾನ್ ಗಂಗೊಳ್ಳಿ ಅವರುಗಳು ಸ್ಥಳದಿಂದ ಶವ ಸಾಗಿಸಲು ನೆರವಾಗಿದ್ದಾರೆ. ರೈಲು ಡಿಕ್ಕಿ ಹೊಡೆದಿರಬಹುದೇ ಅಥವಾ ಆತ್ಮಹತ್ಯೆಗೆ ಶರಣಾಗಿದ್ದಾರೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
Comments are closed.