ಉಡುಪಿ: ಎಲ್ಲಿ ನೋಡಿದ್ರೂ, ಕೇಳಿದ್ರೂ ಈಗ ನೋಟುಗಳದ್ದೇ ಮಾತು. ಈ ನೋತು ಬದಲಾವಣೆ ಸಮಸ್ಯೆಗೆ ಉಡುಪಿಯ ಕಾರ್ಕಳದಲ್ಲೊಂದು ಜೀವ ಸಾವನ್ನಪ್ಪಿದೆ. ನೋಟು ಬದಲಿಸಲು ತಾಲೂಕಿನ ಅಜೆಕಾರು ಕಾರ್ಪೊರೇಶನ್ ಬ್ಯಾಂಕಿಗೆ ಬಂದಿದ್ದ ಹಿರಿಯ ನಾಗರಿಕ ಗೋಪಾಲ ಶೆಟ್ಟಿ(96) ಮೃತಪಟ್ಟ ದುರ್ದೈವಿ.
ತಮ್ಮಲ್ಲಿದ್ದ 1000 ಹಾಗೂ 500 ರೂ ನೋಟುಗಲನ್ನು ಬದಾಲ್ಯಿಸಲು ಬ್ಯಾಂಇಗೆ ಬಂದಿದ್ದ ಗೋಪಾಲ ಶೆಟ್ಟಿ ಅವರು ಕ್ಯೂನಲ್ಲಿ ನಿಂತಿದ್ದರು. ಈ ವೇಳೆ ಬಿಸಿಲ ದಗೆ ಜಾಸ್ಥಿಯಿದ್ದ ಕಾರಣ ಅಶಕ್ತರಾದ ಅವರು ರಕ್ತದೊತ್ತಡ ಹೆಚ್ಚಾಗಿ ಬ್ಯಾಂಕ್ ಆವರಣದಲ್ಲೇ ಕುಸಿದು ಬಿದ್ದು ಸಾವಪ್ಪಿದ್ದಾರೆನ್ನಲಾಗಿದೆ.
ಬೇಸಾಯವನ್ನು ಮಾಡಿಕೊಂಡಿದ್ದ ಗೋಪಾಲ ಶೆಟ್ಟರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Comments are closed.