ಕರಾವಳಿ

ಕೊಲ್ಲೂರು: ವ್ಯಕ್ತಿಯ ಅನುಮಾನಾಸ್ಪದ ಸಾವು: ಕೊಲೆ ಶಂಕೆ

Pinterest LinkedIn Tumblr

ಕುಂದಾಪುರ: ವ್ಯಕ್ತಿಯೊರ್ವನ ಅನುಮಾನಾಸ್ಪದ ಸಾವು ಪ್ರಕರಣ ಕೊಲೆಯ ಅನುಮಾನ ಹುಟ್ಟಿ ಹಾಕಿದ್ದು ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಡ್ಕಲ್ ಗ್ರಾಮದ ಮೆಕ್ಕೆ ಎಂಬಲ್ಲಿ ಈ ಘಟನೆ ನಡೆದಿದೆ.

ಮೆಕ್ಕೆ ನಿವಾಸಿ ಭಾಸ್ಕರ ಪೂಜಾರಿ(38) ಸಾವಿಗೀಡಾದ ದುರ್ದೈವಿ. ನೇಣು ಬಿಗಿದ ಸ್ಥಿತಿಯಲ್ಲಿ ಇವರ ಶವ ಪತ್ತೆಯಾಗಿದೆ.

kundapura_man_suside-1 kundapura_man_suside-2

ಹೆಂಡತಿ ಬಿಟ್ಟು ಹೋಗಿ ಏಳೆಂಟು ವರ್ಷವಾಗಿದ್ದು, ಆಕೆ ಬೇರೊಬ್ಬರ ಜೊತೆ ಸಂಸಾರ ಮಾಡುತ್ತಿದ್ದಳು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಮಾತುಗಳ ನಡುವೆಯೇ ಇದೊಂದು ವ್ಯವಸ್ಥಿತ ಕೊಲೆ ಎಂಬ ಮಾತುಗಳು ಕೇಳಿಬರುತ್ತಿದೆ. ಈತನ್ಮಧ್ಯೆ ನನ್ನ ಸಾವಿಗೆ ನಾನೆ ಕಾರಣ ಎಂದು ಡೆತ್ ನೋಟ್ ಬರೆದಿರುವುದು ಕಂಡುಬಂದಿದೆಯಾದರೂ ಸಿಕ್ಕ ಶವದ ಆಸುಪಾಸಿನ ಕೆಲವೊಂದು ಕುರುಹುಗಳು ಇದು ಆತ್ಮಹತ್ಯೆಯಲ್ಲ ಎಂಬುದನ್ನು ಸಾರಿದೆಯೆಂದು ಸ್ಥಳೀಯರು ಹೇಳಿದ್ದಾರೆ. ಸಾರ್ವಜನಿಕ ವಲಯದಿಂದ ಇದು ಕೊಲೆ ಎಂಬ ಅನುಮಾನ ದಟ್ಟವಾಗಿ ವ್ಯಕ್ತವಾಗಿದೆ.

ಸ್ಥಳಕ್ಕೆ ಕೊಲ್ಲೂರು ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.

Comments are closed.