ಮಂಗಳೂರು: ತುಳು ಚಿತ್ರರಂಗದಲ್ಲಿ ಹೊಸತನದ ನಿರೀಕ್ಷೆ ಮೂಡಿಸಿದ ಉದಯ್ ಶೆಟ್ಟಿ ಕಾಂತಾವರ ಹಾಗೂ ಉದಯ್ ಸಾಲಿಯಾನ್ ನಿರ್ಮಾಣದ ಎಂ.ಎನ್ ಜಯಂತ್ ನಿರ್ದೇಶನ ಹಾಗೂ ಶೋಭರಾಜ್ ಪಾವೂರು ಕಥೆ, ಸಂಭಾಷಣೆ ಬರೆದ “ಏಸ” ತುಳು ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಗುರುವಾರ ಸಂಜೆ ಮಂಗಳೂರಿನ ಪುರಭವನದಲ್ಲಿ ವಿಶಿಷ್ಟ ರೀತಿಯಲ್ಲಿ ಜರಗಿತು.
ಸಮಾರಂಭದ ಉದ್ಘಾಟನೆಯನ್ನು ನಗರದ ಪ್ರಮುಖರಾದ ಜೀವಂಧರ ಬಲ್ಲಾಳ್, ಜಗದೀಶ್ ಅಧಿಕಾರಿ, ಟಿ.ಎ. ಶೀನಿವಾಸ್, ವಿಜಯ್ ಸುವರ್ಣ ಪೊಳಲಿ, ಮೊಹಮ್ಮದ್ ಮೋನು, ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ನವೀನ್.ಡಿ . ಪಡೀಲ್, ಅರವಿಂದ ಬೋಳಾರ್, ಬೋಜರಾಜ್ ವಾವಂಜೂರು, ದೇವಿ ಕಿರಣ್, ಗುರುರಾಜ್ ಎಂ.ಬಿ, ಗುರು ಬಾಯಾರು ಮುಂತಾದ ಗಣ್ಯರು ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು.
“ಏಸ” ತುಳು ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಶೋಭರಾಜ್ ಪಾವೂರು ಅವರು ವಿಶಿಷ್ಠ ರೀತಿಯಲ್ಲಿ ಸಂಯೋಜನೆಗೊಳಿಸಿದ್ದು, ಈ ಮೂಲಕ ಪ್ರೇಕ್ಷಕರೂ ಕೂಡ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುವಂತಹ ಸದಾವಕಾಶವನ್ನು ಕಲ್ಪಿಸಿದ್ದರು.
ಅದೃಷ್ಟಶಾಲಿ ವಿಜೇತ ಪ್ರೇಕ್ಷಕರ ಜೊತೆ ಚಿತ್ರದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ನಗರದ ಪ್ರಮುಖರಾದ ಜೀವಂಧರ ಬಲ್ಲಾಳ್, ಜಗದೀಶ್ ಅಧಿಕಾರಿ, ಟಿ.ಎ. ಶೀನಿವಾಸ್, ವಿಜಯ್ ಸುವರ್ಣ ಪೊಳಲಿ, ಮೊಹಮ್ಮದ್ ಮೋನು, ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಪ್ರಕಾಶ್ ಪಾಂಡೇಶ್ವರ, ನವೀನ್.ಡಿ . ಪಡೀಲ್, ಅರವಿಂದ ಬೋಳಾರ್, ಬೋಜರಾಜ್ ವಾವಂಜೂರು, ಗುರುರಾಜ್ ಎಂ.ಬಿ, ಗುರು ಬಾಯಾರು ಮುಂತಾದ ಗಣ್ಯರು ಸೇರಿ “ಏಸ” ತುಳು ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಿದರು.
ವರದಿ / ಚಿತ್ರ : ಸತೀಶ್ ಕಾಪಿಕಾಡ್ : ಮೊಬೈಲ್ ಸಂಖ್ಯೆ : 9035089084 / 9845896141
Comments are closed.