ಕರಾವಳಿ

ಬೈಕ್ ಹಾಗೂ ಟಿಪ್ಪರ್ ನಡುವೆ ಭೀಕರ ಅಪಘಾತ: ಫೋಟೊಗ್ರಾಫರ್ ಬಲಿ

Pinterest LinkedIn Tumblr

ಕುಂದಾಪುರ: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ತ್ರಾಸಿಯ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ನಡೆದಿದೆ. ಮೃತ ಬೈಕ್ ಸವಾರರನ್ನು ಕುಂದಾಪುರದ ನಿವಾಸಿ ರಾಜೇಶ್ (26) ಎಂದು ಗುರುತಿಸಲಾಗಿದೆ.

kundapura_maravanthe_accident-4 kundapura_maravanthe_accident-1 kundapura_maravanthe_accident-2 kundapura_maravanthe_accident-3 kundapura_maravanthe_accident-5

ಘಟನೆ ವಿವರ: ಛಾಯಗ್ರಾಹಕರಾಗಿದ್ದ ರಾಜೇಶ್ ಅವರು ಕೆಲಸ ನಿಮಿತ್ತ ಮಂಗಳವಾರ ಮಧ್ಯಾಹ್ನ ಕುಂದಾಪುರದಿಂದ ತ್ರಾಸಿಗೆ ಬಂದಿದ್ದು ತ್ರಾಸಿಯ ಪೆಟ್ರೋಲ್ ಬಂಕ್ ಬಳಿ ರಾಜೇಶ್ ಬೈಕಿಗೆ ಟಿಪ್ಪರ್ ಡಿಕ್ಕಿಯಾಗಿದೆ. ಅಪಘಾತದಿಂದ ರಸ್ತೆಗೆಸೆಯಲ್ಪಟ್ಟ ರಾಜೇಶ್ ಅವರ ತಲೆಗೆ ಗಂಭೀರ ಗಾಯವಾಗಿದ್ದು ತೀವೃ ರಕ್ತಸ್ರಾವವಾಗಿ ರಾಜೇಶ್ ಮೃತಪಟ್ಟಿದ್ದಾರೆ.

ಮೃತ ರಾಜೇಶ್ ತಂದೆ, ಇಬ್ಬರು ಸಹೋದರಿಯನ್ನು ಹಾಗೂ ಅಪಾರ ಸ್ನೇಹಿತ ಬಳಗವನ್ನು ಅಗಲಿದ್ದಾರೆ.

ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.