ಉಡುಪಿ: ಅಪಾರ್ಟ್ಮೆಂಟ್ನ ಒಳಗಡೆ ಆಗಮಿಸಿದ ಹತ್ತು ಮಂದಿ ವಿದ್ಯಾರ್ಥಿಗಳ ತಂಡ ಮದ್ಯ ಹಾಗೂ ಪಟಾಕಿ ತಂದು ದಾಂಧಲೆ ಮಾಡಲು ಮುಂದಾಗಿದ್ದು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವಾಚ್ಮನ್ ಮೇಲೆ ವಿದ್ಯಾರ್ಥಿಗಳು ಹಿಗ್ಗಾಮುಗ್ಗ ಹಲ್ಲೆ ನಡೆಸಿದ ಘಟನೆ ಉಡುಪಿಯ ಮಣಿಪಾಲ ಶಿವಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ನಡೆದಿದೆ.
ಅಭಿಜಿತ್ ಕೋಟ್ಯಾನ್, ಶೋಧನ್, ಸುಹಾಸ್ ಹಾಗೂ ಇತರ 10೦ ಜನ ವಿಧ್ಯಾರ್ಥಿಗಳ ಮೇಲೆ ಆರೋಪ ಮಾಡಲಾಗಿದೆ. ವಿಜಯ್ಕುಮಾರ್ ಹಲ್ಲೆಗೊಳಗಾದವರು.
ಈ ಹತ್ತು ಮಂದಿ ವಿದ್ಯಾರ್ಥಿಗಳ ತಂಡ ಅಕ್ರಮಕೂಟ ಸೇರಿಕೊಂಡು ಬೆಳಿಗಿನ ಜಾವ 2 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರ ಅದಿತಿ ಪರ್ವ ಅಪಾರ್ಟ್ಮೆಂಟ್ನ ಗೇಟಿನ ಒಳಗೆ ಪಟಾಕಿ ಮತ್ತು ಮದ್ಯದೊಂದಿಗೆ ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸುತ್ತಿರುವಾಗ ಇಲ್ಲಿನ ವಾಚ್ಮನ್ ವಿಜಯ್ಕುಮಾರ್ (30) ಇದನ್ನು ತಡೆಯಲು ಹೋಗಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಕೆರಳಿದ್ದು ವಿಜಯ್ಕುಮಾರ್ರವರಿಗೆ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ತುಳಿದು, ಮೂಗು ಬಾಯಿಗೆ ಗಾಯ ಮಾಡಿದ್ದಾರೆ.
ಈ ಬಗ್ಗೆ ವಿಜಯ್ಕುಮಾರ್ರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
(ಸಾಂದರ್ಭಿಕ ಚಿತ್ರ)
Comments are closed.